Advertisement

ಪ್ರಮೋದ್‌ ಗೊಂದಲ ಸೃಷ್ಟಿಸಿಲ್ಲ: ಕಾಂಗ್ರೆಸ್‌

06:00 AM Mar 25, 2018 | |

ಉಡುಪಿ: ಬಿಜೆಪಿಗೆ ಹೋಗುವ ಅನಿವಾರ್ಯತೆ ಸಚಿವ ಪ್ರಮೋದ್‌ ಮಧ್ವರಾಜ್‌ ಅವರಿಗೆ ಇಲ್ಲ. ಅವರು ಕಾಂಗ್ರೆಸ್‌ನಲ್ಲಿಯೇ ಇರುತ್ತಾರೆ. ಕಾಂಗ್ರೆಸ್‌ನಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ ಎಂದು ಎಐಸಿಸಿ ಸದಸ್ಯ, ಉಡುಪಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಅಮೃತ್‌ ಶೆಣೈ ಸ್ಪಷ್ಟಪಡಿಸಿದ್ದಾರೆ.

Advertisement

ಮಾ. 24ರಂದು ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗ ಳಿಗೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಗೆ ಹೋಗುವುದಿಲ್ಲ ಎಂಬುದನ್ನು ಪ್ರಮೋದ್‌ ಅವರೇ ಮಾಧ್ಯಮಗಳಿಗೆ ಸ್ಪಷ್ಟ ಪಡಿಸಿದ್ದಾರೆ. ಅವರು ಬಿಜೆಪಿ ಬಾಗಿಲಿಗೆ ಹೋಗಿಲ್ಲ. ಹೋಗ ದಂತೆ ನಾವು ಕೂಡ ಬೀಗ ಹಾಕಿದ್ದೇವೆ. ಅವರೇ ನಮ್ಮ ಅಭ್ಯರ್ಥಿ. ಗೊಂದಲಗಳಿರುವುದು ಬಿಜೆಪಿಯಲ್ಲಿಯೇ ಹೊರತು ನಮ್ಮಲ್ಲಿ ಅಲ್ಲ. ಬಿಜೆಪಿಯವರು ಹೇಳುವಂತೆ ಸಚಿವರು ಕಾಂಗ್ರೆಸ್‌ಗೆ ಮೋಸ ಮಾಡಿಲ್ಲ. ಇತ್ತೀಚೆಗೆ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಅವರು ಪಡುಬಿದ್ರಿಗೆ ಭೇಟಿ ನೀಡಿದಾಗಲೂ ಪ್ರಮೋದ್‌ ಅವರೊಂದಿಗೆ ಪಾಲ್ಗೊಂಡಿದ್ದರು. ಕ್ಷೇತ್ರದ ಪ್ರತಿ ಬೂತ್‌ಗಳಿಗೂ ಎರಡು ಬಾರಿ ಭೇಟಿ ನೀಡಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next