Advertisement

ದರ್ಗಾದ ಗುಹೆಯೊಳಗೆ ಪ್ರತಿಭಟಿಸಿದ ಆರೋಪ: ಪ್ರಮೋದ್ ಮುತಾಲಿಕ್ ಆರೋಪ ಮುಕ್ತ

09:42 AM Dec 04, 2019 | sudhir |

ಚಿಕ್ಕಮಗಳೂರು: 2016 ನವೆಂಬರ್20 ರಂದು ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ಗುಹೆಯೊಳಗೆ ಪ್ರತಿಭಟಿಸಿದ ಆರೋಪ. ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರನ್ನು ಆರೋಪಮುಕ್ತಗೊಳಿಸಿ ಕೋರ್ಟ್ ಆದೇಶ.

Advertisement

ನಾಗಾಸಾಧುಗಳಿಗೆ ಗುಹೆಯೊಳಗೆ ದತ್ತಪಾದುಕೆ ಪೂಜೆಗೆ ಅವಕಾಶ ಕೊಡದಿರುವುದನ್ನು ವಿರೋಧಿಸಿ ನಾಗಾಸಾಧು ಒಬ್ಬರು ಒಂಟಿಕಾಲಿನಲ್ಲಿ ನಿಂತು ಪ್ರತಿಭಟಿಸಿದ್ದರು. ಶ್ರೀರಾಮ ಸೇನೆ ಕಾರ್ಯಕರ್ತರು ಕೂಡ ಪ್ರತಿಭಟನೆ ನಡೆಸಿದ್ದರು. ಸೆಕ್ಟರ್ ಆಫೀಸರ್ ಆಗಿದ್ದ ಅಂದಿನ ಡಿಡಿಪಿಐ ಎಸ್.ಜಿ.ನಾಗೇಶ್ 4 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಒಂದನೇ ಹೆಚ್ಚುವರಿ ಜೆಎಂಎಫ್ ಸಿ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು ಮಂಗಳವಾರ ಪ್ರಮೋದ್ ಮುತಾಲಿಕ್, ಶ್ರೀರಾಮ ಸೇನೆ ರಾಜ್ಯ ಅಧ್ಯಕ್ಷ ಮಹೇಶ್ ಕಟ್ಟಿನಮನೆ, ವಿನೋದ್ ಭಟ್ ಮತ್ತು ಶಾರದಮ್ಮ ಅವರನ್ನು ಆರೋಪ ಮುಕ್ತ ಗೊಳಿಸಿ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next