Advertisement

ಕಾರವಾರ:  ಪ್ರಮೋದ್ ಮಧ್ವರಾಜ್ ಗೆ ಗ್ರಾಮಸ್ಥರಿಂದ ಪ್ರಶ್ನೆಗಳ ಸುರಿಮಳೆ

09:10 AM Apr 28, 2023 | Team Udayavani |

ಕಾರವಾರ:  ದೇವಭಾಗ ಸಮೀಪದ ಮಾಜಾಳಿ  ಗ್ರಾಮದ ಬಾವಳ ಮಜಿರೆಯಲ್ಲಿ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ಮುಖಂಡನಿಗೆ ಗ್ರಾಮಸ್ಥರು  ಪ್ರಶ್ನೆಗಳ ಸುರಿಮಳೆ ಸುರಿಸಿದ ಘಟನೆ ನಿನ್ನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

Advertisement

ಕಾರವಾರ ತಾಲ್ಲೂಕಿನ ಬಾವಳ ಗ್ರಾಮದಲ್ಲಿ ಬಿಜೆಪಿ ಧುರೀಣ ಪ್ರಮೋದ್ ಮಧ್ವರಾಜ್ ಗೆ ಗ್ರಾಮಸ್ಥರು ಪ್ರಶ್ನೆಗಳ ಸುರಿ ಮಳೆ ಗೈದರು.

ಪ್ರಮೋದ್ ಮಧ್ವರಾಜ್ ಪ್ರಚಾರದ ವೇಳೆ, ಶಾಸಕಿ ರೂಪಾಲಿ ನಾಯ್ಕ  ಪ್ರಚಾರಕ್ಕೆ ಆಗಮಿಸದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಶಾಸಕಿ  ರೂಪಾಲಿ ನಾಯ್ಕ ಯಾಕೆ ಬಂದಿಲ್ಲ ? ಶಾಸಕಿಯಾದ ಐದು ವರ್ಷದಲ್ಲಿ ಒಮ್ಮೆಯೂ ಗ್ರಾಮಕ್ಕೆ ಭೇಟಿ ನೀಡಿಲ್ಲ. ಜನರ ಸಮಸ್ಯೆಗಳನ್ನ ಆಲಿಸಿಲ್ಲ. ಮೀನುಗಾರರ ಕಷ್ಟ ಕೇಳಲಿಲ್ಲ ಯಾಕೆ ? ಎಂದು ಪ್ರಶ್ನಿಸಿದರು.  2018ರ ಚುನಾವಣೆಯಲ್ಲಿ ಮತಯಾಚನೆಗೆ ಬಂದವರು, ಮತ್ತೆ ಮುಖ ತೋರಿಸಿಲ್ಲ ಯಾಕೆ?

ಮೀನುಗಾರರಿಗೆ  ಯಾವುದೇ ಅಭಿವೃದ್ಧಿ ಮಾಡದೇ , ಈಗ ಮತ ಯಾಚನೆಗೆ ಬಂದಿದ್ದೀರಾ ಎಂದು ಗ್ರಾಮಸ್ಥರು ಪ್ರಶ್ನಿಸಿದರು.

ಪಕ್ಕದ  ಜಿಲ್ಲೆಯವರಾದ ನೀವು  ಇಲ್ಲಿ  ಬಂದು ಪ್ರಚಾರ ಮಾಡುವುದೇನಿದೆ? ಶಾಸಕಿಯೇ ಸ್ಥಳಕ್ಕೆ ಬಂದು ಗ್ರಾಮಸ್ಥರ ಸಮಸ್ಯೆ ಕೇಳಲಿ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಆಕ್ರೋಶಗೊಂಡವರನ್ನ ವಿಧಾನ ಪರಿಷತ್ ಸದಸ್ಯ  ಗಣಪತಿ ಉಳ್ವೇಕರ್ ಸಮಾಧಾನಪಡಿಸಲೆತ್ನಿಸಿದರು. ಮನವಿ ಕೂಡ ಮಾಡಿಕೊಂಡರು.

Advertisement

ಆಗ ಗ್ರಾಮಸ್ಥರು ಅಣ್ಣಾ ನೀವು ಒಳ್ಳೆಯವರು . ನಿಮ್ಮ ಬಗ್ಗೆ ಆಕ್ಷೇಪವಿಲ್ಲ ಎಂದರು.

ಸ್ಥಳೀಯರು ಸಭೆಗೆ ಆಗಮಿಸದೇ ವೇದಿಕೆ ಹೊರಗೆ ನಿಂತು ಬಿಜೆಪಿ ನಾಯಕರ  ಭಾಷಣ ಆಲಿಸಿದರು.

ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹಾಗೂ ತಾಲೂಕಿನ ಬಿಜೆಪಿ ಮುಖಂಡರುಗಳು ಬಿಜೆಪಿ ಅಭ್ಯರ್ಥಿ,  ಶಾಸಕಿ ರೂಪಾಲಿ ನಾಯ್ಕ ಪರ ಚುನಾವಣಾ ಪ್ರಚಾರಕ್ಕೆ ತೆರಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next