Advertisement

ಭಯೋತ್ಪಾದನೆ ಮೂಲೋತ್ಪಾಟನೆಗೆ ಪ್ರಮೋದ್‌ ಆಗ್ರಹ

12:30 AM Feb 16, 2019 | |

ಉಡುಪಿ: ಸೈನಿಕರ ಮೇಲೆ ನಡೆದ ದಾಳಿ ನಾಗರಿಕ ಸಮಾಜ ಒಪ್ಪುವಂಥದ್ದಲ್ಲ. ಅಮಾಯಕ ಸೈನಿಕರ ಹತ್ಯೆಯನ್ನು ಕೇಂದ್ರ ಸರಕಾರ ಲಘುವಾಗಿ ಪರಿಗಣಿಸಬಾರದು. ಕಾಶ್ಮೀರದಿಂದ ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡಬೇಕು ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು. 

Advertisement

ಶ್ರೀಲಂಕಾದಂತಹ ಸಣ್ಣ ದೇಶ ಎಲ್‌ಟಿಟಿಇಯಂತಹ ಭಯೋತ್ಪಾದಕ ಸಂಘಟನೆಯ ಬೇರು ಸಹಿತ ಕಿತ್ತೆಸೆದಿರುವಾಗ ಭಾರತ ಕೂಡ ಈ ನಿಟ್ಟಿನಲ್ಲಿ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು. 

ಯುವ ಕಾಂಗ್ರೆಸ್‌ ವತಿಯಿಂದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಅಗಲಿದ ಯೋಧರಿಗೆ ಶುಕ್ರವಾರ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿ, ಪಾಕ್‌ ಪ್ರಚೋದಿತ ಉಗ್ರಗಾಮಿಗಳ ಹೇಯಕೃತ್ಯವನ್ನು ಖಂಡಿಸಿದರು. 

ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್‌ ಅಧ್ಯಕ್ಷ ವಿಶ್ವಾಸ್‌ ಅಮೀನ್‌, ಕಾಂಗ್ರೆಸ್‌ ನಾಯಕರಾದ ನಾಗೇಶ ಉದ್ಯಾವರ, ಹರೀಶ ಕಿಣಿ, ರಮೇಶ ಕಾಂಚನ್‌, ಗೀತಾ ವಾಗೆÛ, ಗಣೇಶ ಕೋಟ್ಯಾನ್‌, ಕ್ರಿಸ್ಟಲ್‌ ಅಲ್ಮೇಡ, ಮೆಲ್ವಿನ್‌ ಡಿ’ಸೋಜಾ, ಪ್ರಖ್ಯಾತ ಶೆಟ್ಟಿ, ಇಸ್ಮಾಯಿಲ್‌ ಆತ್ರಾಡಿ, ಗಣೇಶ ನೆರ್ಗಿ, ನಾರಾಯಣ ಕುಂದರ್‌, ಸ್ಟೀವನ್‌ ಕುಲಾಸೊ, ಯತೀಶ ಕರ್ಕೇರ, ಪ್ರಭಾಕರ ಆಚಾರ್ಯ, ಪ್ರಮೀಳಾ ಜತ್ತನ್ನ ಮೊದಲಾದವರು ಪಾಲ್ಗೊಂಡಿದ್ದರು. ಮೊಂಬತ್ತಿ ಹಚ್ಚಿ ಅಗಲಿದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next