Advertisement

ಶಸ್ತ್ರ ಚಿಕಿತ್ಸೆಗೆಂದು ಹೈದರಾಬಾದ್ ತೆರಳಿದ ನಟ ಪ್ರಕಾಶ್ ರೈ

04:09 PM Aug 10, 2021 | Team Udayavani |

ಹೈದರಾಬಾದ್ : ಬಹುಭಾಷಾ ನಟ ಪ್ರಕಾಶ್ ರೈ ಅವರು ಶಸ್ತ್ರ ಚಿಕಿತ್ಸೆಗೆಗಾಗಿ ಹೈದರಾಬಾದ್ ಗೆ ತೆರಳಿದ್ದಾರೆ.

Advertisement

ಇಂದು ಟ್ವೀಟ್ ಮೂಲಕ ಈ ವಿಚಾರವನ್ನು ಅಭಿಮಾನಿಗಳಿಗೆ ತಿಳಿಸಿರುವ ಅವರು, ಒಂದು ಸಣ್ಣ ಫ್ರ್ಯಾಕ್ಚರ್ ಆಗಿದ್ದು, ನನ್ನ ವೈದ್ಯ ಸ್ನೇಹಿತ ಗುರುವರೆಡ್ಡಿ ಅವರ ಬಳಿ ಶಸ್ತ್ರ ಚಿಕಿತ್ಸೆ ಪಡೆಯಲು ಹೈದರಾಬಾದ್ ಗೆ ತೆರಳುತ್ತಿದ್ದೇನೆ. ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ, ನಾನು ಆರೋಗ್ಯವಾಗಿದ್ದೇನೆ. ಸದಾ ನಿಮ್ಮ ನೆನಪಿನಲ್ಲಿ ನನ್ನನ್ನು ಇಟ್ಟುಕೊಳ್ಳಿ ಎಂದಿದ್ದಾರೆ.

ಪ್ರಕಾಶ್ ರೈ ಅವರ ಟ್ವಿಟ್ ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿದ್ದು, ಬೇಗನೆ ಗುಣಮುಖರಾಗಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಟಾಲಿವುಡ್ ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳು ಆಶೀಸಿದ್ದಾರೆ.

ಇನ್ನು ತಿರುಚಿತ್ರಂಬಳಂ ಚಿತ್ರದಲ್ಲಿ ಪ್ರಕಾಶ್ ರೈ ಅವರು ಬಹುಮುಖ್ಯ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ ಎನ್ನುವ ಸುದ್ದಿ ಇತ್ತೀಚಿಗಷ್ಟೆ ರಿವೀಲ್ ಆಗಿತ್ತು. ಈ ಸಿನಿಮಾದಲ್ಲಿ ಧನುಷ್ ಅವರು ನಾಯಕ ನಟರಾಗಿ ಅಭಿನಯಿಸುತ್ತಿದ್ದು, ಮಿಥ್ರಾನ್ ಜವಾಹರ್ ಎಂಬುವರು ನಿರ್ದೇಶನ ಮಾಡುತ್ತಿದ್ದಾರೆ. ಆಗಸ್ಟ್ 05 ರಂದು ಈ ಚಿತ್ರ ಸೆಟ್ಟೇರಿದ್ದು, ಚೆನ್ನೈನಲ್ಲಿ ಶೂಟಿಂಗ್ ಶುರುವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next