Advertisement

ಪ್ರಕಾಶ್‌ ರೈ ಮೇಲೆ ಹಲ್ಲೆ

12:30 AM Feb 17, 2019 | Team Udayavani |

ಮಂಡ್ಯ: ಹುತಾತ್ಮ ಯೋಧ ಗುರುವಿನ ಅಂತ್ಯಸಂಸ್ಕಾರಕ್ಕೆ ಆಗಮಿಸಿದ್ದ ಚಿತ್ರ ನಟ ಪ್ರಕಾಶ್‌ ರೈಗೆ ಸ್ಥಳದಲ್ಲಿ ನೆರೆದಿದ್ದ ಕೆಲವು ದುಷ್ಕರ್ಮಿಗಳು ಗೂಸಾ ನೀಡಿದ ಘಟನೆ ಮೆಳ್ಳಹಳ್ಳಿಯ ಅಂತ್ಯಕ್ರಿಯೆ ಸ್ಥಳದಲ್ಲಿ ನಡೆದಿದೆ.

Advertisement

ಅಂತ್ಯ ಸಂಸ್ಕಾರ ಸ್ಥಳಕ್ಕೆ ಆಗಮಿಸಿದ್ದ ಪ್ರಕಾಶ್‌ ರೈ ಅವರನ್ನು ಕಂಡ ಕೆಲವರು, ನೀನೊಬ್ಬ ದೇಶ ದ್ರೋಹಿ, ನೀನೇಕೆ ಇಲ್ಲಿಗೆ ಬಂದೆ ಎಂದು ಅವಾಚ್ಯ ಶಬಟಛಿಗಳಿಂದ ನಿಂದಿಸಿ ಹಲ್ಲೆ ನಡೆಸಿದರು.

ಹಲ್ಲೆಯಿಂದ ಸ್ಥಳದಲ್ಲೇ ಕೆಳಗೆ ಕುಸಿದು ಬಿದ್ದ ಪ್ರಕಾಶ್‌ ರೈ ಅವರನ್ನು ಪೊಲೀಸರು ರಕ್ಷಿಸಿದರು. ಬಳಿಕ ಸುರಕ್ಷಿತವಾಗಿ ರೈ ಅವರನ್ನು ಕಾರು ಹತ್ತಿಸಿ ಅಲ್ಲಿಂದ ಕಳುಹಿಸಿದರು. ಅಚಾನಕ್ಕಾಗಿ ನಡೆದ ಘಟನೆಗೆ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next