Advertisement

ಭ್ರಷ್ಟಾಚಾರ ನಡೆಸಿಲ್ಲ ಅಂತ ದೇವಸ್ಥಾನದಲ್ಲಿ ದೀಪ ಹಚ್ಚಲಿ… ನಾನೂ ಬಂದು ದೀಪ ಹಚ್ಚುತ್ತೇನೆ

10:00 PM Jul 08, 2023 | Team Udayavani |

ಚಿಕ್ಕಬಳ್ಳಾಪುರ: ಮಾಜಿ ಸಚಿವರಾದ ಡಾ.ಕೆ.ಸುಧಾಕರ್‌ ಅವರ ಸವಾಲನ್ನು ನಾನು ಸ್ಪೀಕರಿಸುತ್ತೇನೆ. ಆದರೆ, ಅವರು ಕೋವಿಡ್‌ ಸಂದರ್ಭದಲ್ಲಿ ಏನೂ ಭ್ರಷ್ಟಾಚಾರ ನಡೆಸಿಲ್ಲ ಅಂತ ಮೊದಲು ಬೋಗನಂದೀಶ್ವರ ದೇವಸ್ಥಾನದಲ್ಲಿ ದೀಪ ಹಚ್ಚಲಿ. ನಾನೂ ಬಂದು ದೀಪ ಹಚ್ಚುತ್ತೇನೆ ಎಂದು ಶಾಸಕ ಪ್ರದೀಪ್‌ ಈಶ್ವರ್‌, ಮಾಜಿ ಸಚಿವ ಸುಧಾಕರ್‌ಗೆ ಪ್ರತಿ ಸವಾಲು ಹಾಕಿದ್ದಾರೆ.

Advertisement

ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಬೆಳಗ್ಗೆ ಕ್ಷೇತ್ರದ ಜನರ ಸಮಸ್ಯೆಗಳನ್ನು ಹೇಳಿಕೊಳ್ಳಲು ವೇದಿಕೆ ಸಿದ್ಧಪಡಿಸಿರುವ ತಮ್ಮ ವೆಬ್‌ಸೈಟ್‌ ಜಾಲತಾಣವನ್ನು ಉದ್ಘಾಟಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಿವೇಶನಗಳ ಹಂಚಿಕೆ ವಿಚಾರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್‌ ಅವರು, ಬೋಗನಂದೀಶ್ವರ ದೇಗುಲದಲ್ಲಿ ದೀಪ ಹಚ್ಚಲಿ ಎಂದು ಹಾಕಿರುವ ಸವಾಲಿನ ಬಗ್ಗೆ ಕೇಳಿದ ಪ್ರಶ್ನೆಗೆ ತೀಕ್ಷ್ಮ ಪ್ರತಿಕ್ರಿಯೆ ನೀಡಿದ ಶಾಸಕ ಪ್ರದೀಪ್‌ ಈಶ್ವರ್‌, ನಾನು ಅವರ ಸವಾಲು ಸ್ವೀಕರಿಸುವೆ. ಆದರೆ, ಅವರು ಕೋವಿಡ್‌ ವೇಳೆ ಏನೂ ಭ್ರಷ್ಟಾಚಾರ ನಡೆಸಿಲ್ಲ ಅಂತ ದೀಪ ಹಚ್ಚಲಿ ಎಂದು ಟಾಂಗ್‌ ನೀಡಿದರು.

ಕ್ಷೇತ್ರದಲ್ಲಿ ವಸತಿ ಯೋಜನೆಗಳ ಹಕ್ಕು ಪತ್ರಗಳ ವಿತರಣೆಯಲ್ಲಿ ಬೋಗಸ್‌ ಆಗಿದೆ. ಅದನ್ನು ನಾವು ಎಸ್‌ಐಟಿ ತನಿಖೆಗೆ ಆದೇಶಿಸುತ್ತೇವೆ. ನಾವು ಅಂತೂ ಸುಮ್ಮನೆ ಬಿಡಲ್ಲ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next