Advertisement

ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಮತ್ತೆ ಹೋಂ ಕ್ವಾರಂಟೈನ್‌ ಗೆ

05:24 PM Oct 01, 2020 | sudhir |

ಬೀದರ: ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರು ಇನ್ನೂ ಒಂದು ವಾರದವರೆಗೆ ಹೋಂ ಕ್ವಾರಂಟೈನ್‌ನಲ್ಲಿ ಇರಲಿದ್ದಾರೆ ಎಂದು ಸಚಿವರ ವಿಶೇಷ ಕರ್ತವ್ಯಾಧಿಕಾರಿ ಶಿವಕುಮಾರ ಕಟ್ಟೆ ಅವರು ತಿಳಿಸಿದ್ದಾರೆ.

Advertisement

ಸಚಿವರಿಗೆ ಕೋವಿಡ್ ಸೋಂಕು ದೃಢಪಟ್ಟು, ನಂತರ ವರದಿ ನೆಗೆಟಿವ್‌ ಬಂದಿತ್ತಾದರೂ ವೈದ್ಯರ ಸಲಹೆ ಮೇರೆಗೆ ಹೋಂ ಕ್ವಾರಂಟೈನ್‌ ಆಗಿದ್ದರು.

ಈಗಲೂ ಸಚಿವರು ಪೂರ್ಣ ಪ್ರಮಾಣದಲ್ಲಿ ಗುಣಮುಖರಾಗಿರುವುದಿಲ್ಲ. ಅವರಿಗೆ ದೈಹಿಕ ನಿಶ್ಯಕ್ತಿ ಇರುವುದರಿಂದ ವೈದ್ಯರ ಸಲಹೆ ಮೇರೆಗೆ ಇನ್ನೂ ಒಂದು ವಾರ ಕಾಲ ಮನೆಯಲ್ಲಿಯಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಚಿವರು ಸಾರ್ವಜನಿಕರ ಭೇಟಿಗೆ ಅಲಭ್ಯರಿರುವುದರಿಂದ ಸಾರ್ವಜನಿಕರು ಸಹಕರಿಸಬೇಕು. ಅಗತ್ಯ ಕರ್ತವ್ಯಗಳಿಗೆ ಸಚಿವರು ಮೊಬೈಲ್‌ನಲ್ಲಿ ಲಭ್ಯರಿರುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next