Advertisement

ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಪೂರೈಕೆ

09:38 AM Aug 02, 2020 | Suhan S |

ಭಾರತೀನಗರ: ರೈತರ ಕೃಷಿ ಪಂಪ್‌ಸೆಟ್‌ ಗಳಿಗೆ ಅಡೆತಡೆ ರಹಿತ ವಿದ್ಯುತ್‌ ಕಲ್ಪಿಸಲು ಕ್ರಮ ವಹಿಸ ಲಾಗಿದೆ ಎಂದು ಶಾಸಕ ಡಿ.ಸಿ. ತಮ್ಮಣ್ಣ ಹೇಳಿದರು.

Advertisement

ನಗರದಲ್ಲಿ ಸೆಸ್ಕ್ನಿಂದ ನಡೆದ ಮದ್ದೂರು ವಿಭಾಗದ ಅಕ್ರಮ- ಸಕ್ರಮ ಯೋಜನೆಯಡಿ ರೈತರ ಕೃಷಿ ಪಂಪ್‌ ಸೆಟ್‌ಗಳಿಗೆ ವಿದ್ಯುತ್‌ ಪರಿವರ್ತಕಗಳ ಅಳವಡಿಕೆಗೆ ಚಾಲನೆ ನೀಡಿ ಮಾತನಾಡಿ, ಮದ್ದೂರು ತಾಲೂಕು ವ್ಯಾಪ್ತಿಯಲ್ಲಿ 64.06 ಕೋಟಿ ವೆಚ್ಚದಲ್ಲಿ ಕ್ರಿಯಾ ಯೋಜನೆ ರೂಪಿಸಿದ್ದು, 3120 ರೈತರು ಅಕ್ರಮವನ್ನು ಸಕ್ರಮ ಮಾಡಿಸಿಕೊಳ್ಳಲು ಸೆಸ್ಕ್ಗೆ ಹಣ ಪಾವತಿಸಿದ್ದಾರೆ. ಈ ಹಿನ್ನೆಲೆ  ಯಲ್ಲಿ ಕಾಮಗಾರಿ ಆರಂಭಿಸಲಾಗಿದೆ ಎಂದರು.

45 ಕೋಟಿ ವೆಚ್ಚದಲ್ಲಿ ಅಪೂರ್ಣಗೊಂಡಿರುವ ನಿರಂತರ ಜ್ಯೋತಿ ಯೋಜನೆಯ ವಿದ್ಯುತ್‌ ಕಾಮಗಾರಿ ಗಳನ್ನು ನಡೆಸಲು ಅನುಮೋದನೆ ಸಿಕ್ಕಿದೆ. ತಾಲೂಕಿನ 5 ಗ್ರಾಮಗಳನ್ನು ಮಾದರಿ ಗ್ರಾಮ ಯೋಜನೆಯಡಿ ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರತಿ ಗ್ರಾಮಕ್ಕೂ ತಲಾ 50 ಲಕ್ಷದಂತೆ 2.5 ಕೋಟಿ ಹಣ ಬಿಡುಗಡೆಗೊಂಡಿದೆ. ಈ ಹಣದಲ್ಲಿ ಬೋರ್‌ವೆಲ್‌ ಸೇರಿದಂತೆ ಇನ್ನಿತರೆ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗು ವುದು ಎಂದರು.

ಸೆಸ್ಕ್ನ ಕಾರ್ಯನಿರ್ವಹಕ ಎಂಜಿನಿ  ಯರ್‌ ಎಂ.ರವಿಶಂಕರ್‌, ಜೆಡಿಎಸ್‌ ತಾಲೂಕು ಘಟಕ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ಡಿಸಿಸಿ ಬ್ಯಾಂಕ್‌ ಮಾಜಿ ನಿರ್ದೇಶಕ ಹೊನ್ನೇಗೌಡ, ಎಚ್‌.ಎಂ. ಮರಿಮಾದೇಗೌಡ, ಗ್ರೆçನೇಜ್‌ ದೊಡ್ಡಣ್ಣ, ದೇವರ ಹಳ್ಳಿ ವೆಂಕಟೇಶ್‌, ತಾಲೂಕು ವಿದ್ಯುತ್‌ ಗುತ್ತಿಗೆದಾರರ ಸಮಿತಿ ಅಧ್ಯಕ್ಷ ಡಿ .ಎಂ.ಮಂಜುನಾಥ್‌, ಗುತ್ತಿಗೆದಾರ ಗುರುದತ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next