Advertisement

ಆಯನೂರು ಮಂಜುನಾಥ್‌ ವಿರುದ್ಧ ಪೋಸ್ಟ್‌ ವಾರ್‌

10:06 PM Apr 04, 2023 | Shreeram Nayak |

ಶಿವಮೊಗ್ಗ: ಆಯನೂರು ಮಂಜುನಾಥ್‌ ಅವರು ಈಶ್ವರಪ್ಪ ವಿರುದ್ಧ ಮಾಡಿರುವ ಟೀಕೆಗಳಿಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ವಾರ್‌ ಆರಂಭವಾಗಿದೆ. ಮಂಜುನಾಥ್‌ ಭಾವಚಿತ್ರ ಹಾಕಿ ಅನೇಕ ಪ್ರಶ್ನೆಗಳನ್ನು ಕೇಳಿ ಟೀಕಿಸಲಾಗಿದೆ.

Advertisement

ಜಸ್ಟ್‌ ಆಸ್ಕ್ ಹೆಸರಲ್ಲಿ ಪೋಸ್ಟರ್‌ ಹರಿಯಬಿಟ್ಟಿದ್ದು, ಶಾಂತವಾಗಿದ್ದ ಶಿವಮೊಗ್ಗದಲ್ಲಿ ಅಮಾಯಕ ಹರ್ಷನನ್ನು ಕೊಂದಿದ್ದು ಯಾರು?’, ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಬಂದ ಅನಂತರವೂ ಮಾಜಿ ಕಾರ್ಪೊರೇಟರ್‌ ಮನೆಯಲ್ಲಿ ಗೋಮಾಂಸ ದೊರೆತಿದ್ದರ ಮರ್ಮವೇನು?’ ಐಎಸ್‌ಐ ನಂಟಿರುವ ಆತಂಕವಾದಿ ಶಿವಮೊಗ್ಗದಲ್ಲೇ ಏಕೆ ಸಿಕ್ಕಿಬಿದ್ದ’ ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ.

ಅಲ್ಲದೇ ಕೋಮು ಸೌಹಾರ್ದ ಪಾಠ ಮಾಡುವ ಮಾತಿನ ಮಲ್ಲ, ಈ ವಿಷಯದಲ್ಲಿ ಜಾಣಮೌನ ಏಕೆ ಎಂದು ಟೀಕಿಸಲಾಗಿದೆ. ಅಲ್ಲದೇ ಆಯನೂರು ಎಲುಬಿಲ್ಲದ ನಾಲಿಗೆ, ಹುರುಳಿಲ್ಲದ ಹೇಳಿಕೆ, ನಿಯತ್ತಿಲ್ಲದ…’ ಎಂಬ ಹೆಸರಿನ ಸಂದೇಶ ಹಾಕಿ ಅನೇಕ ಪ್ರಶ್ನೆಗಳನ್ನು ಕೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next