Advertisement

ವೇದಿಕೆಯಲ್ಲಿ ಹಾಡುತ್ತಿರುವಾಗಲೇ ಕೊನೆಯುಸಿರೆಳೆದ ಒಡಿಶಾ ಖ್ಯಾತ ಗಾಯಕ ಮಹಾಪಾತ್ರ

05:49 PM Oct 04, 2022 | Team Udayavani |

ಭುವನೇಶ್ವರ್: ದುರ್ಗಾ ಪೂಜೆಯ ಕಾರ್ಯಕ್ರಮದ ವೇದಿಕೆಯಲ್ಲಿ ಹಾಡುತ್ತಿರುವಾಗಲೇ ಕುಸಿದು ಬಿದ್ದು ಜನಪ್ರಿಯ ಒಡಿಶಾ ಗಾಯಕ ಮುರಳಿ ಮಹಾಪಾತ್ರ ಅವರು ಸಾವನ್ನಪ್ಪಿರುವ ಘಟನೆ ಕೋರಾಪುಟ್ ಜಿಲ್ಲೆಯಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಆರೋಗ್ಯ ಸ್ಥಿತಿ ಚಿಂತಾಜನಕ; ಐಸಿಯುನಲ್ಲಿ ಚಿಕಿತ್ಸೆ

ಕಾರ್ಯಕ್ರಮದಲ್ಲಿ ಕೆಲವು ಹಾಡುಗಳನ್ನು ಹಾಡಿದ್ದ ಮುರಳಿ ಮಹಾಪಾತ್ರ ಅವರು ದಿಢೀರನೆ ವೇದಿಕೆ ಮೇಲಿದ್ದ ಕುರ್ಚಿಯ ಮೇಲೆ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದರು.

ಮುರಳಿ ಮಹಾಪಾತ್ರ (59ವರ್ಷ) ಅವರು ಹೃದಯಾಘಾತದಿಂದ ವೇದಿಕೆಯಲ್ಲೇ ಸಾವನ್ನಪ್ಪಿರುವುದಾಗಿ ಅವರ ಸಹೋದರ ವಿಭೂತಿ ಪ್ರಸಾದ್ ಮಹಾಪಾತ್ರ ತಿಳಿಸಿದ್ದರು. ಮುರಳಿ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆಯೇ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸಂತಾಪ ವ್ಯಕ್ತಪಡಿಸಿದ್ದಾರೆ.

ದಿವಂಗತ ಒಡಿಯಾ ಗಾಯಕ, ಗೀತರಚನೆಕಾರ ಮತ್ತು ಸಂಯೋಜಕ ಜೇಪೋರ್ ಅಕ್ಷಯ ಮೊಹಾಂತಿ ಅವರ ಸಂಗೀತದ ಶೈಲಿಯನ್ನು ಮುರಳಿ ಅವರು ಅನುಕರಿಸುತ್ತಿದ್ದುದರಿಂದ “ಜೇಪೋರ್ ನ ಅಕ್ಷಯ್ ಮೊಹಾಂತಿ” ಎಂದು ಕರೆಯಲಾಗುತ್ತಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next