Advertisement

Odisha ಚುನಾವಣ ಕಣದಲ್ಲಿ ರಾಜವಂಶದ 12 ಸದಸ್ಯರು!

01:01 AM Apr 23, 2024 | Team Udayavani |

ಭುವನೇಶ್ವರ: ಕರ್ನಾಟಕದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಯದುವೀರ್‌ ಒಡೆಯರ್‌ ಸ್ಪರ್ಧಿಸುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಒಡಿಶಾ ದಲ್ಲಿ ವಿವಿಧ ರಾಜಮನೆತನಗಳಿಗೆ ಸೇರಿದ 12 ಮಂದಿ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿದ್ದು, ಮತಯಾಚನೆಯಲ್ಲಿ ತೊಡಗಿದ್ದಾರೆ. ಇದರಲ್ಲಿ 10 ಮಂದಿ ವಿಧಾನಸಭೆಗೆ ಹಾಗೂ ಇಬ್ಬರು ಲೋಕಸಭೆಗೆ ಸ್ಪರ್ಧಿಸಿದ್ದಾರೆ. ಆಡಳಿತಾರೂಢ ಬಿಜೆಡಿ ಧಾರಾಕೋಟೆ ರಾಜವಂಶದ ಸುಲಕ್ಷಣ ಗೀತಾಂಜಲಿ ದೇವಿ ಸೇರಿ 8 ಮಂದಿಯನ್ನು, ಬಿಜೆಪಿ ಹಾಲಿ ಸಂಸದೆ ಸಂಗೀತಾ ಕುಮಾರಿ ಸಿಂಗ್‌ ದೇವ್‌ ಸೇರಿದಂತೆ ಮೂವರನ್ನು ಹಾಗೂ ಕಾಂಗ್ರೆಸ್‌ ಸುಷ್ಮಿತಾ ಸಿಂಗ್‌ ದೇವ್‌ರನ್ನು ಕಣಕ್ಕಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next