Advertisement

ಉಡುಪಿ : ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ ಎಂ.ಸುಧಾಕರ್ ರಾವ್ ನಿಧನ

03:31 PM Jul 25, 2022 | Team Udayavani |

ಉಡುಪಿ : ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಚಾರ್ಯ ಪ್ರೊ ಎಂ.ಸುಧಾಕರ್ ರಾವ್(84) ಜು.24ರಂದು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

Advertisement

ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸುದೀರ್ಘ ಅವಧಿಗೆ ಸಸ್ಯಶಾಸ್ತ್ರ, ಪ್ರಾಧ್ಯಾಪಕರು, ವಿಭಾಗ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ನೀಟ್, ಸಿಇಟಿ ಮೊದಲಾದ ಸ್ಮರ್ಧಾತ್ಮಕ ಪರೀಕ್ಷಾರ್ಧಿಗಳಿಗಾಗಿ ಅವರು ಬರೆದ ಆಬ್ಜೆಕ್ಟಿವ್ ಆಫ್ ಬಯೋಲಜಿ ಪಠ್ಯಪುಸ್ತಕವು ಬಹಳಷ್ಟು ಜನಪ್ರಿಯತೆ ಪಡೆದುಕೊಂಡಿದೆ.

ಇವರ ನಿಧನಕ್ಕೆ ಅದಮಾರು ಮಠದ ಉಭಯ ಶ್ರೀಗಳು, ಕಾಲೇಜಿನ ಆಡಳಿತ ಮಂಡಳಿ, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಹಳೆ ವಿದ್ಯಾರ್ಥಿ ಸಂಘದವರು ಸಂತಾಪ ಸೂಚಿಸಿದ್ದಾರೆ.

Advertisement

ಇದನ್ನೂ ಓದಿ : ಬಡವರು ಕನಸುಗಳನ್ನು ಕಾಣುವುದು ಮಾತ್ರವಲ್ಲದೆ ಈಡೇರಿಸಿಕೊಳ್ಳಬಹುದು: ರಾಷ್ಟ್ರಪತಿ

Advertisement

Udayavani is now on Telegram. Click here to join our channel and stay updated with the latest news.

Next