Advertisement

ಮೈಕ್ರೋ ಎಟಿಎಂ ಸೌಲಭ್ಯಸದುಪಯೋಗಕ್ಕೆ ಪೂಜಾರ ಸಲಹೆ

09:49 AM May 22, 2020 | Suhan S |

ಕಲಾದಗಿ: ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ಕೊಡಮಾಡಿದ ಮೈಕ್ರೋ ಎಟಿಎಂ ಸೌಲಭ್ಯವನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ದೇವನಾಳ ಪಿಕೆಪಿಎಸ್‌ ಅಧ್ಯಕ್ಷ ಅಶೋಕ ಪೂಜಾರಿ ಹೇಳಿದರು.

Advertisement

ತುಳಸಿಗಿರಿ ಗ್ರಾಮದಲ್ಲಿ ಮೈಕ್ರೋ ಎಟಿಎಂಗೆ ಚಾಲನೆ ನೀಡಿ ಮಾತನಾಡಿದ ಅವರು, ಮೈಕ್ರೋ ಎಟಿಎಂ ಸಹಕಾರಿ, ರೈತರು ಬ್ಯಾಂಕ್‌ಗಳಿಗೆ ತೆರಳಿ ಸರತಿ ಸಾಲಿನಲ್ಲಿ ನಿಂತು ಹಣ ಪಡುವ ಕಷ್ಟ ತಪ್ಪಲಿದೆ. ತುಳಸಿಗೇರಿಯಲ್ಲಿ ಮುಖ್ಯ ಪ್ರದೇಶ ಅಗಸಿಯಲ್ಲಿ ಈ ಎಟಿಎಂ ಸೌಲಭ್ಯ ಕಾರ್ಯಾರಂಭ ಮಾಡಿದೆ ಎಂದರು. ಕಳೆದ ಎರಡು ದಿನದಲ್ಲಿ ತುಳಸಿಗೇರಿಯ 30ಕ್ಕೂ ಅಧಿ ಕ ರೈತರು ಇದರ ಸೌಲಭ್ಯ ಪಡೆದಿದ್ದಾರೆ. ರಜಾ ದಿನ ಹೊರತು ಪಡಿಸಿ ಬೆಳಗ್ಗೆ 10ರಿಂದ ಮದ್ಯಾಹ್ನ ಎರಡು ಗಂಟೆಯವರೆಗೂ ಇದರ ಸೌಲಭ್ಯ ಪಡೆಯಬಹುದಾಗಿದೆ. ರಾಷ್ಟ್ರೀಕೃತ ಬೇರೆ ಬ್ಯಾಂಕಿನ ಗ್ರಾಹಕರು, ರೈತರು ಈ ಮೈಕ್ರೋ ಎಟಿಎಂ ಮೂಲಕ ಹಣ ಪಡೆಯಬಹುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next