Advertisement

ಗುಜರಾತ್‌ನಲ್ಲಿ ರಾಹುಲ್‌ ಮೇಲೆ ಹಲ್ಲೆಗೆ ಪುದುಚೇರಿ ಸಚಿವನ ಖಂಡನೆ

11:36 AM Aug 05, 2017 | Team Udayavani |

ಪುದುಚೇರಿ : ಗುಜರಾತ್‌ ಪ್ರವಾಹ ಪೀಡಿತರಿಗೆ ಸಾಂತ್ವನ ಹೇಳುವುದಕ್ಕಾಗಿ ಅಲ್ಲಿಗೆ ತೆರಳಿದ್ದ ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಕಾರಿನ ಮೇಲೆ ಕಲ್ಲೆಸೆಯಲಾದ ಘಟನೆಯನ್ನು ಪುದುಚೇರಿ ಸಚಿವ ಎ ನಮಃಶಿವಾಯಂ ಅವರು ತೀವ್ರವಾಗಿ ಖಂಡಿಸಿದ್ದಾರೆ. ಇದು ಅತ್ಯಂತ ನಾಚಿಕೆಗೇಡಿನ ಮತ್ತು ಅಕ್ಷಮ್ಯ ಕೃತ್ಯವಾಗಿದೆ ಎಂದವರು ಟೀಕಿಸಿದ್ದಾರೆ. 

Advertisement

“ಕೋಮು ಭಾವನೆಗಳಿಂದ ಮತ್ತು ತಮ್ಮ ಪಕ್ಷದ ಸಮೀಪ ದೃಷ್ಟಿಯ ನೀತಿಗಳಿಂದ ಪ್ರಭಾವಿತರಾಗಿರುವ ಬಿಜೆಪಿಯ ಬೆಂಬಲಿಗರು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ಕಾರಿನ ಮೇಲೆ ಕಲ್ಲೆಸೆದು ದಾಳಿ ನಡೆಸಿರುವುದು ಅತ್ಯಂತ ಹೇಯ ಹಾಗೂ ದುರದೃಷ್ಟಕರ ಕೃತ್ಯವಾಗಿದೆ’ ಎಂದು ಸಚಿವ ನಮಃಶಿವಾಯಂ ಅವರು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಖಂಡಿಸಿದ್ದಾರೆ. 

“ಬಿಜೆಪಿ ಕಾರ್ಯಕರ್ತರ ಈ ಉದ್ಧಟನದ ಕೃತ್ಯವನ್ನು ಯಾರೂ ಒಪ್ಪುವುದಿಲ್ಲ. ಇದು ಆಕ್ಷೇಪಾರ್ಹ ಮತ್ತು ಜುಗುಪ್ಸೆಯ ಕೃತ್ಯವಾಗಿದೆ’ ಎಂದವರು ಹೇಳಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next