Advertisement

ಅಸೌಖ್ಯದಿಂದ ಉದ್ಯಮಿ ಪೊಲ್ಯ ಹರೀಶ್ ಶೆಟ್ಟಿ ನಿಧನ

12:09 PM Aug 09, 2020 | keerthan |

ಕಾಪು: ಶಬರಿಮಲೆ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ (ಸಾಸ್) ಯ ಕಾಪು ತಾಲೂಕು ಘಟಕದ ಅಧ್ಯಕ್ಷ, ಉದ್ಯಮಿ ಹರೀಶ್ ಶೆಟ್ಟಿ ಪೊಲ್ಯ (54) ಅವರು ರವಿವಾರ ಅಸೌಖ್ಯದಿಂದಾಗಿ ನಿಧನ ಹೊಂದಿದರು.

Advertisement

ಮೃತರು ತಾಯಿ, ಪತ್ನಿ, ಪುತ್ರ ಮತ್ತು ಪುತ್ರಿರನ್ನು ಅಗಲಿದ್ದಾರೆ.

ಶಿರ್ವ ಮತ್ತು ಪಡುಬಿದ್ರಿಯಲ್ಲಿ ಹೊಟೇಲ್ ಉದ್ಯಮಿಯಾಗಿದ್ದ ಅವರು ಜಯ ಕರ್ನಾಟಕ ಉಚ್ಚಿಲ, ಜವನೆರ್ ಉಚ್ಚಿಲ, ಸರಸ್ವತಿ ಮಂದಿರ ಶಾಲಾ ಹಳೆ ವಿದ್ಯಾರ್ಥಿ ಸಂಘ, ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಉಚ್ಚಿಲ, ಮಹಾಲಿಂಗೇಶ್ವರ ಮಹಾಗಣಪತಿ ಯಕ್ಷಗಾನ ಕಲಾ ಸಂಘ, ರೋಟರಿ ಕ್ಲಬ್ ಉಚ್ಚಿಲ ಸೇರಿದಂತೆ ವಿವಿಧ ಸಂಘ – ಸಂಸ್ಥೆಗಳ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು.

ಪ್ರಸ್ತುತ ರೋಟರಿ ಕ್ಲಬ್ ನ ವಲಯ ಸೇನಾನಿಯಾಗಿದ್ದ ಅವರು ಶಬರಿಮಲೆ ಅಯ್ಯಪ್ಪ ಸೇವಾ ಸಮಿತಿಯ ಕಾಪು ತಾಲೂಕು ಘಟಕದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು.

ಸಾಮಾಜಿಕ ಧಾರ್ಮಿಕ, ಶೈಕ್ಷಣಿಕ ಸಹಿತವಾಗಿ ವಿವಿಧ ಕ್ಷೇತ್ರಗಳ ಬೆಳವಣಿಗೆಯಲ್ಲಿ ಅವಿರತ ಸೇವೆ ಸಲ್ಲಿಸುತ್ತಾ ಬರುತ್ತಿದ್ದು, ಅಕಾಲಿಕವಾಗಿ ನಿಧನ ಹೊಂದಿದ ಹರೀಶ್ ಶೆಟ್ಟಿ ಪೊಲ್ಯ ಅವರ ಅಗಲುವಿಕೆಗೆ ಸಮಾಜದ ವಿವಿಧ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next