Advertisement
ರಾಜ್ಯದಲ್ಲಿ ಟಾಟಾ-ಎಐಜಿ ಹಾಗೂ ಯುನಿವರ್ಸಲ್ ಸೊಂಪೊ ಕಂಪನಿಗಳು ಬೆಳೆವಿಮೆ ಪರಿಹಾರ ನೀಡುತ್ತಿವೆ. ವಿಮಾ ಕಂಪನಿಗಳ ಪ್ರತಿನಿಧಿಗಳೊಂದಿಗಿನ ಸಭೆಯಲ್ಲಿ ತಕರಾರುಗಳನ್ನು ಇತ್ಯರ್ಥಗೊಳಿಸಲಾಗುವುದು.
Related Articles
Advertisement
ಸಾವಯವ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಕರ್ನಾಟಕ ಅಗ್ರಸ್ಥಾನದಲ್ಲಿದ್ದು, ಉತ್ಪಾದನೆಯಲ್ಲಿ 3ನೇ ಸ್ಥಾನದಲ್ಲಿದೆ. ಸಾವಯವ ಬೆಳೆಗಾರರ ಒಕ್ಕೂಟ ಮಾಡಿ ಅವುಗಳೊಂದಿಗೆ ಆಹಾರ ಸಂಸ್ಕರಣಾ ಕಂಪನಿಗಳ ಸಂಪರ್ಕ ಕಲ್ಪಿಸಲಾಗುತ್ತಿದೆ. ಮಧ್ಯವರ್ತಿಗಳ ಶೋಷಣೆ ತಡೆಯುವ ಉದ್ದೇಶದಿಂದ ಬೆಳೆಗಾರರ ಒಕ್ಕೂಟ ಪೂರಕವಾಗಿದೆ ಎಂದರು.
ರಾಜ್ಯದಲ್ಲಿ ಒಟ್ಟು 1ಕೋಟಿ 10ಲಕ್ಷ ಹೆಕ್ಟೇರ್ನಲ್ಲಿ ಕೃಷಿ ಮಾಡಲಾಗುತ್ತಿದ್ದು, ಅದರಲ್ಲಿ 2.5 ಲಕ್ಷ ಎಕರೆ ಪ್ರದೇಶದಲ್ಲಿ ಸಾವಯವ ಕೃಷಿ ಮಾಡಲಾಗುತ್ತಿದೆ. ಇದರ ಪ್ರಮಾಣ ಹೆಚ್ಚಾಗಬೇಕಿದೆ. ಸರಕಾರ ರಿಟೇಲ್ ಮಾರುಕಟ್ಟೆ ಮೂಲಕ ಸಾವಯವ ಉತ್ಪನ್ನಗಳನ್ನು ಮಾರಾಟ ಮಾಡುವುದು ಕಷ್ಟ.
ಆದರೆ ಬೆಂಗಳೂರಿನಲ್ಲಿ 6 ಹಾಪ್ಕಾಮ್ಸ್ ಮಳಿಗೆಗಳಲ್ಲಿ ಕೇವಲ ಸಾವಯವ ಬೆಳೆಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು. ಕೃಷಿ ಹೊಂಡಗಳ ಸಂಖ್ಯೆ ಹೆಚ್ಚಿಸಲಾಗುತ್ತಿದೆ. ಮಲೆನಾಡು ಭಾಗದ ಜಿಲ್ಲೆಗಳಲ್ಲೂ ಕೃಷಿ ಹೊಂಡಗಳನ್ನು ನಿರ್ಮಿಸಲಾಗುತ್ತಿದೆ. ಕೃಷಿ ಹೊಂಡ ಆರಂಭಿಸಿದ ಸಂದರ್ಭದಲ್ಲಿ ಕೆಲವರು ತಮಾಷೆ ಮಾಡಿದರು.
ಆದರೆ ಕೃಷಿಹೊಂಡದಿಂದ ರೈತರ ಇಳುವರಿ ಹೆಚ್ಚಾಗುತ್ತಿದೆ ಎಂದು ವಿವರಿಸಿದರು. ನೀರು ಹೆಚ್ಚಿನ ಪ್ರಮಾಣದಲ್ಲಿ ಬಳಕೆ ಮಾಡುವ ಬೆಳೆಗಳನ್ನು ಕಡಿಮೆ ಮಾಡಿ ಕಡಿಮೆ ಪ್ರಮಾಣದ ನೀರಿನಲ್ಲಿ ಬೆಳೆಯುವ ರಾಗಿ, ಬಿಳಿಜೋಳ ಬೆಳೆಗಳಿಗೆ ಪ್ರೋತ್ಸಾಹಿಸಲು ಕ್ವಿಂಟಲ್ಗೆ 400ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ ಎಂದರು.
ವೇರ್ಹೌಸ್ ಸಂಖ್ಯೆಯಲ್ಲಿ ಹೆಚ್ಚಳ: ನಮ್ಮ ಸರಕಾರ ಅಧಿಕಾರಕ್ಕೆ ಬರುವ ಮುನ್ನ ರಾಜ್ಯದಲ್ಲಿ 13 ಲಕ್ಷ ಟನ್ ಸಾಮರ್ಥ್ಯದ ವೇರ್ಹೌಸ್ಗಳಿದ್ದವು. ಆದರೆ ಸದ್ಯ 26 ಲಕ್ಷ ಟನ್ ಸಾಮರ್ಥ್ಯದ ವೇರ್ ಹೌಸ್ ನಿರ್ಮಿಸಲಾಗಿದೆ. ನಬಾರ್ಡ್ನಿಂದ 700 ಕೋಟಿ ರೂ. ಸಾಲ ಹಾಗೂ ಇತರ ಸಂಸ್ಥೆಗಳಿಂದ 300 ಕೋಟಿ ರೂ. ಪಡೆದು ವೇರ್ಹೌಸ್ಗಳನ್ನು ನಿರ್ಮಿಸಲಾಗಿದೆ ಎಂದರು.