Advertisement

Politics: ಕೊನೆವರೆಗೆ ಪಾಲಿಟಿಕ್ಸ್‌: ಮಾಜಿ ಸಿಎಂ ಉಮಾ ಭಾರತಿ

09:00 PM Aug 22, 2023 | Team Udayavani |

ಭೋಪಾಲ್‌: “ಜೀವನದ ಅಂತ್ಯದ ವರೆಗೆ ರಾಜಕೀಯದಲ್ಲಿ ಇರುವೆ” ಹೀಗೆಂದು ಹೇಳಿದ್ದು ಮಧ್ಯಪ್ರದೇಶದ ಮಾಜಿ ಸಿಎಂ ಉಮಾ ಭಾರತಿ. ವರ್ಷಾಂತ್ಯಕ್ಕೆ ಆ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಇರುವುದರಿಂದ ಮತ್ತೆ ಸಕ್ರಿಯ ರಾಜಕಾರಣದಲ್ಲಿ ಅದೃಷ್ಟ ಪರೀಕ್ಷೆಗೆ ಹೊರಟಿರುವಂತೆ ಕಾಣುತ್ತಿದೆ.

Advertisement

ಆದರೆ, ಅವರಿಗೆ ಸ್ಪರ್ಧೆ ಮಾಡಲು ಅವಕಾಶ ಸಿಗೋತ್ತೋ ಇಲ್ಲವೋ ಗೊತ್ತಿಲ್ಲ. ಅನಾರೋಗ್ಯದ ಕಾರಣದಿಂದ 2019 ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರಲಿಲ್ಲ. ರಾಮ ಮಂದಿರ ನಿರ್ಮಾಣದ ಅಭಿಯಾನದಲ್ಲಿ ಪ್ರಧಾನ ಪಾತ್ರ ವಹಿಸಿದ್ದ ಅವರು ಬಿಜೆಪಿ ನಾಯಕತ್ವದ ವಿರುದ್ಧ ಸೆಡ್ಡು ಹೊಡೆದು ಪಕ್ಷ ತ್ಯಜಿಸಿ ಮತ್ತೆ ಬಿಜೆಪಿಗೆ ಸೇರ್ಪಡೆಯಾಗಿದ್ದವರು ಉಮಾ ಭಾರತಿ. ಸದ್ಯಕ್ಕೆ ಮಧ್ಯಪ್ರದೇಶದಲ್ಲಿ ಶಿವರಾಜ್‌ ಸಿಂಗ್‌ ಚೌಹಾಣ್‌ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ನಡೆಸುತ್ತಿದೆ. ಅವರನ್ನು ಬದಿಗಿಟ್ಟು ಒಂದು ಕಾಲದ ಫ‌ಯರ್‌ ಬ್ರ್ಯಾಂಡ್‌ ಎಂದು ಖ್ಯಾತರಾಗಿರುವ ಉಮಾ ಭಾರತಿಯವರನ್ನು ಮತ್ತೆ ಮುಖ್ಯ ಭೂಮಿಕೆಗೆ ಬಿಜೆಪಿ ತರುವ ಬಗ್ಗೆ ಚಿಂತನೆ ನಡೆಸಿದಂತೆ ಕಾಣುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next