Advertisement

ಸಿನೆಮಾ ಹೆಸರಿನಲ್ಲಿ ರಾಜಕೀಯ ಸಲ್ಲದು: ಸಚಿವ ಜೆ.ಸಿ.ಮಾಧುಸ್ವಾಮಿ

11:46 PM Mar 20, 2022 | Team Udayavani |

ಮೈಸೂರು: ದಿ ಕಾಶ್ಮೀರ್‌ ಫೈಲ್ಸ್‌ ಸಿನೆಮಾ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ನಮ್ಮ ಇಷ್ಟ ನಾವು ಸಿನೆಮಾ ನೋಡಿದ್ದೇವೆ. ಅವರಿಗೆ ಇಷ್ಟ ಇಲ್ಲ. ಅದಕ್ಕೆ ನೋಡಿಲ್ಲ ಅಷ್ಟೇ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು.

Advertisement

ಸಿನೆಮಾಗಳು ಮಾಧ್ಯಮ ಅಂತಲೇ ನಾನು ಭಾವಿಸಿದ್ದೇನೆ. ನೈಜತೆಯನ್ನು ಬಿಂಬಿಸಿದರೆ ಆ ಭಾವನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಉತ್ತಮ. ಅದನ್ನು ಬಿಟ್ಟು ಅತಿರೇಕದಿಂದ ವರ್ತಿಸಿದರೆ ಎಷ್ಟು ಸರಿ ಎಂದು ಪ್ರಶ್ನಿಸಿದರು.

ಪಠ್ಯದಲ್ಲಿ ಭಗವದ್ಗೀತೆ ಸೇರಿಸುವ ವಿಚಾರದಲ್ಲಿ ಯಾವುದೇ ಪ್ರಯತ್ನವಿಲ್ಲ. ಶಿಕ್ಷಣ ಸಚಿವರೂ ಕೂಡ ಈ ಬಗ್ಗೆ ಸ್ಪಷ್ಟವಾಗಿ ಹೇಳಿದ್ದಾರೆ. ಅಧಿವೇಶನವನ್ನು ಮೊಟಕು ಮಾಡುವ ಸನ್ನಿವೇಶ ಇಲ್ಲ, ಸರಕಾರದ ಮುಂದೆ ಅದರ ಯೋಚನೆಯೂ ಇಲ್ಲ ಎಂದರು.

 

Advertisement

Udayavani is now on Telegram. Click here to join our channel and stay updated with the latest news.

Next