Advertisement

ಹರೇಕಳದಲ್ಲಿ ಮುಂದುವರೆದ ರಾಜಕೀಯ ಹೊಡೆದಾಟ: ಸಿಪಿಐಎಂ ಬೆಂಬಲಿತ ಅಭ್ಯರ್ಥಿ ಮೇಲೆ ಹಲ್ಲೆ

01:39 PM Dec 24, 2020 | keerthan |

ಉಳ್ಳಾಲ: ಗ್ರಾಮ ಪಂಚಾಯತಿ ಮತದಾನದ ವೇಳೆ ತಂಡಗಳ ನಡುವಿನ ಹೊಡೆದಾಟದಿಂದ ಸುದ್ದಿಯಾಗಿದ್ದ ಹರೇಕಳದಲ್ಲಿ ಮತ್ತೊಂದು ಹೊಡೆದಾಟ ನಡೆದಿರುವ ಬಗ್ಗೆ ವರದಿಯಾಗಿದೆ.

Advertisement

ಹರೇಕಳದ ಸಿಪಿಐಎಂ ಬೆಂಬಲಿತ ಅಭ್ಯರ್ಥಿ ಇಕ್ಬಾಲ್ ಮೇಲೆ ಕಾಂಗ್ರೆಸ್ ಕಾರ್ಯಕರ್ತ ಮುನೀರ್ ಎಂಬಾತ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಸದ್ಯ ಇಬ್ಬರನ್ನೂ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ:ಹರೇಕಳ: ಮತದಾನಕ್ಕೆ ಆಮಿಷ ಆರೋಪ, ಕಾಂಗ್ರೆಸ್- ಎಸ್ ಡಿಪಿಐ ಕಾರ್ಯಕರ್ತರ ಮಾತಿನ ಚಕಮಕಿ

ಹರೇಕಳದ ಫರೀದ್ ನಗರ ಎಂಬಲ್ಲಿ ಗುರುವಾರ ಈ ಹಲ್ಲೆ ನಡೆದಿದೆ. ಗ್ರಾಮ ಪಂಚಾಯತು ಚುನಾವಣೆಯ ಫಲಿತಾಂಶದ ಬಗ್ಗೆ ಚರ್ಚೆ ನಡೆಸುತ್ತಾ ಚರ್ಚೆ ತಾರಕಕ್ಕೇರಿ ಹಲ್ಲೆ ನಡೆಸಲಾಗಿದೆ. ಘಟನೆಯಲ್ಲಿ ಇಕ್ಬಾಲ್ ತಲೆಗೆ ಗಾಯವಾಗಿದೆ.

ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next