Advertisement

ಓಮ್ನಿ ಕಾರನ್ನು ಬೆನ್ನಟ್ಟಿದ್ದ ಬೈಂದೂರು ವೃತ್ತ ನಿರೀಕ್ಷಕರ ಜೀಪು ಪಲ್ಟಿ: ಇಬ್ಬರಿಗೆ ಗಾಯ

02:53 PM Oct 16, 2020 | keerthan |

ಬೈಂದೂರು: ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ಓಮ್ನಿ ಕಾರೊಂದನ್ನು ಬೆನ್ನಟ್ಟಿದ ಬೈಂದೂರು ವೃತ್ತ ನಿರೀಕ್ಷಕರ ಜೀಪು ಪಲ್ಟಿಯಾಗಿ, ವೃತ್ತ ನಿರೀಕ್ಷಕರು ಸೇರಿದಂತೆ ಇಬ್ಬರು ಗಾಯಗೊಂಡ ಘಟನೆ ಗುರುವಾರ ತಡರಾತ್ರಿ ನಡೆದಿದೆ.

Advertisement

ಬೈಂದೂರು ಒತ್ತಿನೆಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವೃತ್ತ ನಿರೀಕ್ಷಕ ಸುರೇಶ್ ನಾಯ್ಕ್ ರಾತ್ರಿ ಗಸ್ತಿನಲ್ಲಿದ್ದಾಗ ಓಮ್ನಿ ಕಾರೊಂದು ಅನುಮಾನಾಸ್ಪದವಾಗಿ ಸಂಚರಿಸುತ್ತಿತ್ತು. ಹೀಗಾಗಿ ವೃತ್ತ ನಿರೀಕ್ಷಕರು ಈ ಕಾರನ್ನು ಬೆನ್ನಟ್ಟಿ ಹೋದಾಗ ಒತ್ತಿನೆಣೆ ರಾಘವೇಂದ್ರ ಮಠದ ಬಳಿ ನಿಯಂತ್ರಣ ತಪ್ಪಿದ ಜೀಪು ಕಂದಕಕ್ಕೆ ಉರುಳಿದೆ ಎಂದು ವರದಿ ತಿಳಿಸಿದೆ.

ಘಟನೆಯಲ್ಲಿ ವೃತ್ತ ನಿರೀಕ್ಷಕ ಸುರೇಶ್ ನಾಯ್ಕ್, ಚಾಲಕ ಹೇಮ್ ರಾಜ್ ಗಾಯಗೊಂಡಿದ್ದು, ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next