Advertisement

ಪೊಲೀಸ್‌ ಜೀಪ್‌ ಎಗರಿಸಿದ ಭೂಪ!

11:00 PM Dec 30, 2019 | Lakshmi GovindaRaj |

ಚಿಕ್ಕಮಗಳೂರು: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಪೊಲೀಸ್‌ ಜೀಪನ್ನೇ ಅಪಹರಿಸಿ ಪರಾರಿಯಾದ ಘಟನೆ ನಗರದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ. ಪೊಲೀಸ್‌ ಜೀಪ್‌ (ಸಂಖ್ಯೆ ಕೆ.ಎ.18 ಜಿ.728) ನಗರದ ಹನುಮಂತಪ್ಪ ವೃತ್ತದ ಪೆಟ್ರೋಲ್‌ ಬಂಕ್‌ಗೆ ಡೀಸೆಲ್‌ ತುಂಬಿಸಿಕೊಳ್ಳಲು ಬಂದಾಗ ಈ ಘಟನೆ ನಡೆದಿದೆ.

Advertisement

ಪೊಲೀಸ್‌ ಜೀಪಿನ ಚಾಲಕ ಇಂಧನ ತುಂಬಿಸಿಕೊಂಡು ಕೀಲಿಯನ್ನು ಜೀಪಿನಲ್ಲಿಯೇ ಬಿಟ್ಟು ಹಣ ನೀಡಲು ಬಂಕ್‌ನ ಕಚೇರಿಗೆ ಹೋದಾಗ, ಅಲ್ಲೇ ಇದ್ದ ವ್ಯಕ್ತಿಯೋರ್ವ ಜೀಪನ್ನು ಚಾಲನೆ ಮಾಡಿಕೊಂಡು ಕಡೂರು-ಮಂಗಳೂರು ರಸ್ತೆಯಲ್ಲಿ ವೇಗವಾಗಿ ತೆರಳಿ ಲಕ್ಯಾವರೆಗೂ ಹೋಗಿದ್ದ.

ತಕ್ಷಣ ಎಚ್ಚೆತ್ತ ಚಾಲಕ ಈ ಮಾಹಿತಿಯನ್ನು ಇಲಾಖೆಗೆ ತಿಳಿಸಿ, ಕಳುವಾದ ಜೀಪು ಹಿಂಬಾಲಿಸಲು ಮುಂದಾದಾಗ, ಜೀಪನ್ನು ರಸ್ತೆಯಲ್ಲೇ ನಿಲ್ಲಿಸಿ ಪರಾರಿಯಾಗಿದ್ದಾನೆ. ಈ ಸಂಬಂಧ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳನ್ನು ಸಂಪರ್ಕಿಸಿದಾಗ, ಪ್ರಕರಣ ನಡೆದಿರುವುದು ನಿಜ. ನಿರ್ಲಕ್ಷé ತೋರಿದ ಜೀಪ್‌ ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next