Advertisement

ಲಕ್ಷಣ್‌ ಕೊಲೆ ಆರೋಪಿ ಕ್ಯಾಟ್‌ ನಾಗನ ಕಾಲಿಗೆ ಪೊಲೀಸ್‌ ಗುಂಡು!

02:34 PM Mar 09, 2019 | |

ಬೆಂಗಳೂರು: ಕುಖ್ಯಾತ  ರೌಡಿಶೀಟರ್‌ ಲಕ್ಷ್ಮಣ್‌ ಕೊಲೆ ಪ್ರಕರಣದ ಆರೋಪಿಯು ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದು ಈ ವೇಳೆ ಕಾಲಿಗೆ ಗುಂಡು ಹಾರಿಸಿ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಶನಿವಾರ ನಡೆದಿದೆ. 

Advertisement

ಕರೀಂ ಸಾಬ್‌ ಪಾಳ್ಯದಲ್ಲಿ ಕೊಲೆಗೆ ಬಳಸಿದ ಮಚ್ಚನ್ನು ವಶಕ್ಕೆ ತೆಗೆದುಕೊಳ್ಳಲು ತೆರಳಿದ್ದ ವೇಳೆ ಕ್ಯಾಟ್‌ನಾಗ ಮುಖ್ಯಪೇದೆ ಚೌಡೇಗೌಡ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್‌ ಪ್ರಶಾಂತ್‌ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ. ಆದರೂ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕಾಲಿಗೆ 2 ಗುಂಡು ಹಾರಿಸಿ ಕ್ಯಾಟ್‌ನಾಗನನ್ನು ವಶಕ್ಕೆ ಪಡೆಯಲಾಗಿದೆ. 

ಹತ್ಯೆ ಪ್ರಕರಣ ಕೇಂದ್ರ ಅಪರಾಧ ತನಿಖಾ ವಿಭಾಗಕ್ಕೆ (ಸಿಸಿಬಿ)ವರ್ಗಾವಣೆಯಾಗಿದ್ದು ಈಗಾಗಲೇ ಇಬ್ಬರನ್ನು ಸೋಲದೇವನ ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಶಕ್ಕೆ ಪಡೆಯಲಾಗಿದ್ದು ,ಇನ್ನುಳಿದವರಿಗಾಗಿ ಶೋಧ ಮುಂದುವರಿದಿದೆ. 

Advertisement

Udayavani is now on Telegram. Click here to join our channel and stay updated with the latest news.

Next