Advertisement

Maharashtra: ಸಂಜಯ್‌ ರಾವತ್‌ ವಿರುದ್ಧದ ದೇಶದ್ರೋಹ ಆರೋಪ ಕೈಬಿಟ್ಟ ಪೊಲೀಸರು

09:22 PM Dec 19, 2023 | Team Udayavani |

ಮುಂಬೈ: ಶಿವಸೇನೆ ಮುಖವಾಣಿ “ಸಾಮ್ನಾ”ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಶಿವಸೇನೆಯ(ಉದ್ಧವ್‌ ಬಣ) ನಾಯಕ ಸಂಜಯ್‌ ರಾವತ್‌ ಬರೆದಿದ್ದ ಅವಹೇಳನಕಾರಿ ಲೇಖನಕ್ಕೆ ಸಂಬಂಧಿಸಿ ದಾಖಲಿಸಿದ್ದ ದೇಶದ್ರೋಹ ಪ್ರಕರಣವನ್ನು ಮಹಾರಾಷ್ಟ್ರ ಪೊಲೀಸರು ಕೈಬಿಟ್ಟಿದ್ದಾರೆ. ಪ್ರಕರಣದ ಕುರಿತು ಕಾನೂನು ಸಲಹೆ ಕೇಳಿದ ಬಳಿಕ ಪೊಲೀಸರು ದೇಶದ್ರೋಹ ಆರೋಪ ಕೈಬಿಟ್ಟರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

ಬಿಜೆಪಿಯ ಯಾವತ್ಮಾಲ್‌ ಜಿಲ್ಲಾ ಸಂಯೋಜಕರು ನೀಡಿದ ದೂರಿನ ಮೇರೆಗೆ ಶಿವಸೇನೆ ರಾಜ್ಯಸಭೆ ಸದಸ್ಯ, “ಸಾಮ್ನಾ” ಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಸಂಜಯ್‌ ರಾವತ್‌ ವಿರುದ್ಧ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next