Advertisement

FIR ನಿಂದ ಅಮಿತ್‌ ಶಾ ಹೆಸರು ಕೈಬಿಟ್ಟ ಪೊಲೀಸರು

12:19 AM Jun 04, 2024 | Team Udayavani |

ಹೈದರಾಬಾದ್‌: ಬಾಲಕರನ್ನು ಚುನಾವಣ ಪ್ರಚಾರಕ್ಕೆ ಬಳಸಿದ ಪ್ರಕರಣದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹಾಗೂ ತೆಲಂಗಾಣ ಬಿಜೆಪಿ ಮುಖ್ಯಸ್ಥ ಜಿ.ಕಿಶನ್‌ ರೆಡ್ಡಿಯವರ ಮೇಲೆ ದಾಖಲಿಸಲಾಗಿದ್ದ ಎಫ್ಐಆರ್‌ ಅನ್ನು ಹಿಂಪಡೆಯಲಾಗಿದೆ. ತೆಲಂಗಾಣ ಮುಖ್ಯ ಚುನಾವಣಾಧಿಕಾರಿಗಳಿಗೆ ನೀಡಲಾಗಿದ್ದ ದೂರಿನಲ್ಲಿ, ಮೇ 1ರಂದು ಲಾಡ್ಲಾವಾಜಾದಿಂದ ಸುಧಾ ಟಾಕೀಸ್‌ವರೆಗೂ ನಡೆದ ರ್‍ಯಾಲಿಯಲ್ಲಿ ಅಮಿತ್‌ ಶಾ ಜತೆಗೆ ವೇದಿಕೆ ಮೇಲೆ ಒಂದಷ್ಟು ಬಾಲಕರಿದ್ದರು ಎಂದು ಟಿಪಿಸಿಸಿ ಉಪಾಧ್ಯಕ್ಷ ಜಿ.ನಿರಂಜನ್‌ ಆರೋಪಿಸಿದ್ದರು.

Advertisement

ಚುನಾವಣ ಅಧಿಕಾರಿಗಳು ಪ್ರಕರಣವನ್ನು ಪೊಲೀಸರಿಗೆ ನೀಡಿದ್ದರು. ಘಟನೆಯಲ್ಲಿ ಅಮಿತ್‌ ಶಾ, ರೆಡ್ಡಿ ಪಾತ್ರ ಇಲ್ಲವೆಂಬುದು ದೃಢಪಟ್ಟ ಹಿನ್ನೆಲೆಯಲ್ಲಿ ಅವರ ಹೆಸರನ್ನು ಎಫ್ಐಆರ್‌ನಿಂದ ಕೈಬಿಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next