Advertisement

ಅದಿವಾಸಿ ಮಕ್ಕಳ ನೆರವಿಗೆ ನಿಂತ ಮಹಿಳಾ ಕಾನ್ಸಟೇಬಲ್ “ಮುಂಬೈಯ ಮದರ್ ತೆರೇಸಾ”

11:22 AM Jul 23, 2021 | ಸುಹಾನ್ ಶೇಕ್ |
ಇವರೆಲ್ಲದರ ಸಂಕಷ್ಟದ ನಡುವೆಯೂ ಕೆಲವೊಂದು ವಿಚಾರಗಳು , ಕೋವಿಡ್ ಸಮಯದಲ್ಲಿ ಆಶದಾಯಕವಾಗಿದೆ. ಯಾರೂ ಇಲ್ಲದವರಿಗೂ ನಾವಿದ್ದೇವೆ ಎನ್ನುವ ಆಸರೆಯನ್ನು ಎಷ್ಟೋ ಜನರು ಮುಂದೆ ಬಂದು ಸಹಾಯ ಮಾಡುತ್ತಿದ್ದಾರೆ. ಕಷ್ಟದಲ್ಲಿರುವ ಜನರಿಗೆ ಹಸಿವು ನೀಗಿಸುವ ಜನರು, ಆರ್ಥಿಕವಾಗಿ ಕುಗ್ಗಿರುವ ಕುಟುಂಬಕ್ಕೆ ನೆರವು, ಕೋವಿಡ್ ನಿಂದ ಎಲ್ಲರನ್ನೂ ಕಳೆದುಕೊಂಡು ದಿಕ್ಕೇ ತೋಚದ ಹರೆಯದ ಮಕ್ಕಳಲ್ಲಿ ಉತ್ಸಾಹವನ್ನು ಕಾಣಿಸುವ ಜನರು ನಿಜಕ್ಕೂ ಮಹಾನ್. ಇಂಥ ಮಹಾನ್ ಜನರಲ್ಲಿ, ಕೋವಿಡ್ ವಾರಿಯರ್ಸ್ ರಲ್ಲಿ ಒಬ್ಬರು ರೆಹಾನಾ ಶೇಕ್ ಭಗವಾನ್.
Now pay only for what you want!
This is Premium Content
Click to unlock
Pay with

ಮನುಷ್ಯ ಎಷ್ಟೇ ದೊಡ್ಡ  ಸಿರಿವಂತಿಕೆಯ ವ್ಯಕ್ತಿಯಾದರೂ ಅವನು/ ಅವಳು ಮಾನವೀಯ ಮೌಲ್ಯಗಳನ್ನು ಮರೆಯಬಾರದು. ನಮ್ಮಿಂದ ಇನ್ನೊಬ್ಬರಿಗೆ ಸಹಾಯ ಆಗದಿದ್ದರೂ ಪರವಾಗಿಲ್ಲ. ಅಸಹಾಯಕರನ್ನು ನೋಡಿ ಛಿ, ಥೂ ಎಂದು ಮೂಗು ಮುಚ್ಚಿಕೊಳ್ಳುವಷ್ಟು ಕೆಳ ಮಟ್ಟಕ್ಕೆ ಇಳಿಯಬಾರದು. ಕೆಲವರು ಮನಸ್ಸಿನಿಂದ ಎಷ್ಟು ಒಳ್ಳೆಯವರೆಂದರೆ, ಸದಾ ನಿರ್ಗತಿಕರಿಗೆ ಸಹಾಯ, ಆಸರೆ, ಹೊಸ ಆಶಯವನ್ನು ಕಲ್ಪಿಸುತ್ತಲೇ ಸಮಾಜದ ಕಣ್ಣಿಗೆ ಗೌರವವಾಗಿ ಕಾಣುತ್ತಾರೆ.

Advertisement

ಕೋವಿಡ್ ಸಂಕಷ್ಟದಲ್ಲಿ ಕರುಳು ಹಿಂಡುವ ಕರುಣಾಜನಕ ಕಥೆಗಳನ್ನು ನಾವು ಕೇಳಿದ್ದೇವೆ. ಅಪ್ಪ-ಅಮ್ಮನನ್ನು ಕಳೆದುಕೊಂಡು ರೋಧಿಸುವ ಪುಟ್ಟ ಮಕ್ಕಳ ಕಣ್ಣೀರು ಎಂಥಾ ಕಠೋರ ಮನಸ್ಸನ್ನು ಕರಗಿಸಬಹುದು. ಇಡೀ ಕುಟುಂಬವನ್ನೇ ಕಳೆದುಕೊಂಡ ಕೆಲ ವ್ಯಕ್ತಿಗಳಿಗೆ ಮುಂದಿನ ದಾರಿ ಕಾಣದ್ದಷ್ಟು ದುಃಖ ಆವರಿಸಿಕೊಂಡಿರಬಹುದು.

ಇವರೆಲ್ಲದರ ಸಂಕಷ್ಟದ ನಡುವೆಯೂ ಕೆಲವೊಂದು ವಿಚಾರಗಳು , ಕೋವಿಡ್ ಸಮಯದಲ್ಲಿ ಆಶದಾಯಕವಾಗಿದೆ. ಯಾರೂ ಇಲ್ಲದವರಿಗೂ ನಾವಿದ್ದೇವೆ ಎನ್ನುವ ಆಸರೆಯನ್ನು ಎಷ್ಟೋ ಜನರು ಮುಂದೆ ಬಂದು ಸಹಾಯ ಮಾಡುತ್ತಿದ್ದಾರೆ. ಕಷ್ಟದಲ್ಲಿರುವ ಜನರಿಗೆ ಹಸಿವು ನೀಗಿಸುವ ಜನರು, ಆರ್ಥಿಕವಾಗಿ ಕುಗ್ಗಿರುವ ಕುಟುಂಬಕ್ಕೆ ನೆರವು, ಕೋವಿಡ್ ನಿಂದ ಎಲ್ಲರನ್ನೂ ಕಳೆದುಕೊಂಡು ದಿಕ್ಕೇ ತೋಚದ ಹರೆಯದ ಮಕ್ಕಳಲ್ಲಿ ಉತ್ಸಾಹವನ್ನು ಕಾಣಿಸುವ ಜನರು ನಿಜಕ್ಕೂ ಮಹಾನ್. ಇಂಥ ಮಹಾನ್ ಜನರಲ್ಲಿ, ಕೋವಿಡ್ ವಾರಿಯರ್ಸ್ ರಲ್ಲಿ ಒಬ್ಬರು ರೆಹಾನಾ ಶೇಕ್ ಭಗವಾನ್.

ರೆಹಾನಾ ಮುಂಬೈ ಪೊಲೀಸ್ ಕಾನ್ಸಟೇಬಲ್. 2000 ಇಸವಿಯಲ್ಲಿ ಪೊಲೀಸ್ ಸೇವೆಗೆ ಸೇರಿಕೊಂಡ ಅವರು, ಮೊದಲಿನಿಂದಲೂ ಸೇವಾ ಮನೋಭಾವವನ್ನು ಹೊಂದಿರುವವರು. ಕ್ರೀಡೆಯಲ್ಲೂ ಸಾಧನೆಗೈದಿರುವ ಅವರು, ವಾಲಿಬಾಲ್ ಆಟಗಾರ್ತಿಯೂ ಹೌದು.

Advertisement

ಕಳೆದ ವರ್ಷ ತನ್ನ ಮಗಳ ಹುಟ್ಟುಹಬ್ಬಕ್ಕೆ ಹಾಗೂ ಹಬ್ಬದ ಶಾಪಿಂಗ್ ಗೆ ಇಟ್ಟಿದ್ದ ಹಣವನ್ನು, ಈ ಬಾರಿ ನಾವು ಶಾಪಿಂಗ್ ಮಾಡುವುದು ಬೇಡಯೆಂದು ಹೇಳಿದ್ದರು. ಇದನ್ನು ಹೇಳಿದ ಬಳಿಕ ತಮಗೆ ತಿಳಿದಿದ್ದ ರಾಯಗಢದ ವಾಜೆ ತಾಲುಕಿನ ದ್ಯಾನ್ ಯನಿ ವಿದ್ಯಾಲಯದ ಪ್ರಾಂಶುಪಾಲರ  ಬಳಿ ಮಗಳ ಹುಟ್ಟು ಹಬ್ಬವನ್ನು ಶಾಲಾ ಮಕ್ಕಳ ಜತೆ ಆಚರಿಸುವುದಾಗಿ ಹೇಳಿದಾಗ, ಪ್ರಾಂಶುಪಾಲರು ಖುಷಿಯಿಂದಲೇ ಒಪ್ಪಿದ್ದರು. ಆದರೆ ಕೋವಿಡ್ ಕಾರಣದಿಂದ ನಿರ್ಬಂಧವಿದ್ದ ಪಯಣದಿಂದ ತೆಗೆದಿಟ್ಟಿದ್ದ ಹಣವನ್ನು ಕೊಡುತ್ತಾರೆ.

ಅದೊಂದು ದಿನ ರಾಯಗಢದ ಶಾಲೆಗೆ ಹೋಗುವ ರೆಹಾನಾ ಅಲ್ಲಿನ ಮಕ್ಕಳ ಶಿಸ್ತನ್ನು ಕಂಡು ಖುಷಿಗೊಳ್ಳುತ್ತಾರೆ. ಆದರೆ ಅದರಲ್ಲಿ ಬಹುತೇಕರು ಬಡತನದ ಹಿನ್ನೆಲೆಯಿಂದ ಬಂದವರಾಗಿದ್ದರು. ಕೆಲ ಮಕ್ಕಳ ಕಾಲಿನಲ್ಲಿ ಚಪ್ಪಲಿಯೂ ಇರುವುದಿಲ್ಲ. ಇದನ್ನು ಕಂಡ ರೆಹಾನಾನವರ ಮನಸ್ಸಿಗೆ ತುಂಬಾ ಬೇಜಾರು ಆಗುತ್ತದೆ. ಆ ಕ್ಷಣವೇ ಅವರಿಗೆ ತಾನು ಈ ಮಕ್ಕಳ ಆರೈಕೆಗಾಗಿ ಏನಾದರೂ ಮಾಡಬೇಕೆನ್ನುವ ಯೋಚನೆ ಬರತೊಡಗುತ್ತದೆ.

ಆ ವೇಳೆ ಬರುವ ಯೋಚನೆಯೇ ಮಕ್ಕಳನ್ನು  ದತ್ತು ಪಡೆಯುವುದು. ಅದಿವಾಸಿ ಸಮುದಾಯದ ಮಕ್ಕಳನ್ನು ಕಂಡು ಅವುಗಳಿಗೆ ಏನಾದರೂ ಮಾಡುವ ಕಾರಣದಿಂದ ದತ್ತು ಪಡೆಯುವ ನಿರ್ಧಾರವನ್ನು ಶಾಲಾ ಪ್ರಾಂಶುಪಾಲರ ಜತೆ ಚರ್ಚಸುತ್ತಾರೆ. ಅಲ್ಲಿಂದ ಒಪ್ಪಿದ ಮೇಲೆ ಮನೆಯಲ್ಲಿ ಗಂಡ ಸೇರಿದಂತೆ ಎಲ್ಲರೂ ರೆಹಾನಾಳ ನಿರ್ಧಾರವನ್ನು ಬೆಂಬಲಿಸುತ್ತಾರೆ.

ರೆಹಾನಾ ಒಟ್ಟು 50 ಅದಿವಾಸಿ ಮಕ್ಕಳನ್ನು ಶಾಲೆಯಿಂದ ದತ್ತು ಪಡೆಯುತ್ತಾರೆ. ಅವರನ್ನು ಶಿಕ್ಷಿತರನ್ನಾಗಿ ಮಾಡಿ, ಉತ್ತಮ ನಾಗರಿಕರನ್ನಾಗಿ ರೂಪಿಸುವುದು ಅವರ ಉದ್ದೇಶ ಎನ್ನುತ್ತಾರೆ ರೆಹಾನಾ.

ಇಷ್ಟು ಮಾತ್ರವಲ್ಲದೆ ರೆಹೆನಾ ಕೋವಿಡ್ ಸಂಕಷ್ಟದಲ್ಲಿ ಮಾಸ್ಕ್, ಆಕ್ಸಿಜನ್, ರಕ್ತದಾನವನ್ನು ನೀಡಲು ನೆರವಾಗಿದ್ದಾರೆ. ಲಸಿಕೆಯನ್ನು ಪಡೆಯಲು ಜನರಿಗೆ ಅರಿವು ಮೂಡಿಸುವ ಕಾರ್ಯವನ್ನು ರೆಹಾನಾ ಮಾಡುತ್ತಿದ್ದಾರೆ. ರೆಹಾನಾರ ಮನೋಭಾವ ಅರಿತ ಪೊಲೀಸ್​ ಕಮಿಷನರ್​​ ಹೇಮಂತ್​ ನಗ್ರಲೆ ಆಕೆ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸನ್ಮಾನಿಸಿದ್ದರು. ಮುಂಬೈನ ಒಂದು ಸಣ್ಣ ಮನೆಯಲ್ಲಿರುವ ರೆಹಾನಾ, ಯಾವ ಹೊತ್ತಿನಲ್ಲೂ ಜನರ ಸಹಾಯಕ್ಕೆ ಸ್ಪಂದಿಸುತ್ತಾರೆ. ಇವರ ಮಾನವೀಯ ಗುಣದಿಂದ ಇವರನ್ನು ಮುಂಬಯಿಯ ‘ಮದರ್ ಥರೇಸಾ’ ಎಂದು ಕರೆಯುತ್ತಾರೆ.

-ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.