Advertisement

Gudibande: ಬುದ್ದಿ ಹೇಳಿದ್ದಕ್ಕೆ ಪೊಲೀಸರ ಬೈಕ್ ಗೆ ಬೆಂಕಿ ಇಟ್ಟ ಭೂಪ

08:15 AM Sep 28, 2023 | Team Udayavani |

ಗುಡಿಬಂಡೆ: ಪಟ್ಟಣ ಕಲಿಮ್ ವುಲ್ಲಾ ಎಂಬ ವ್ಯಕ್ತಿ ತನ್ನ ಅಣ್ಣ ತಮ್ಮಂದಿರೊಂದಿಗೆ ಮೇಲೆ ಗಲಾಟೆ ಮಾಡಿ ಆಸ್ಪತ್ರೆಗೆ ಬಂದಿದ್ದು, ಆ ಸಮಯದಲ್ಲಿ ಪೊಲೀಸರು ಬಂದು ಬುದ್ದಿವಾದ ಹೇಳಿದಕ್ಕೆ ಆತ ಮಧ್ಯರಾತ್ರಿ ಪೊಲೀಸರ ದ್ವಿಚಕ್ರ ವಾಹನಕ್ಕೆ ಬೆಂಕಿ ಇಟ್ಟು ವಿಕೃತಿ ಮೆರೆದಿದ್ದಾನೆ.

Advertisement

ಪಟ್ಟಣದಲ್ಲಿ ಹಣ್ಣು ವ್ಯಾಪಾರ ಮಾಡಿಕೊಂಡಿದ್ದ ಕಲಿಮ್ ವುಲ್ಲಾ ಸೆ.27ರ ಬುಧವಾರ ರಾತ್ರಿ ತನ್ನ ಅಣ್ಣ ತಮ್ಮಂದಿರೊಂದಿಗೆ ಗಲಾಟೆ ಮಾಡಿ ಅವರನ್ನು ಹೊಡೆದು ಗಾಯಗೊಳಿಸಿದ್ದು, ಚಿಕಿತ್ಸೆ ಪಡೆಯಲು ಎಲ್ಲರೂ ಆಸ್ಪತ್ರೆಗೆ ಬಂದಿದ್ದರು.

ಈ ವಿಷಯ ತಿಳಿದ ಪೊಲೀಸ್ ಸಿಬ್ಬಂದಿ ಎ.ಎಸ್.ಐ ನಂಜುಂಡಶರ್ಮ ಮತ್ತು ಕಾನ್ಸ್ ಟೇಬಲ್ ಆಸ್ಪತ್ರೆಗೆ ಬಂದು ಅವರಿಗೆ ಬೈದು ಬುದ್ದಿವಾದ ಹೇಳಿದ್ದರು. ಇದರಿಂದ ಕುಪಿತಗೊಂಡ ಕಲಿಮ್ ವುಲ್ಲಾ ಎಂಬ ಭೂಪ ರಾತ್ರಿ ಸುಮಾರು12.30 ರ ಸಮಯದಲ್ಲಿ ಎ.ಎಸ್.ಐ ನಂಜುಂಡಶರ್ಮ ಅವರ ಮನೆ ಬಳಿ ತೆರಳಿ ಹೊಸ ಟಿ.ವಿ.ಎಸ್ ದ್ವಿಚಕ್ರ ವಾಹನಕ್ಕೆ ಬೆಂಕಿ ಇಟ್ಟಿದ್ದು, ಇದರಿಂದ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next