Advertisement

ಪೇದೆ ಮೇಲೆ ಕಾರು ಚಾಲಕನಿಂದ ಹಲ್ಲೆ

05:50 PM Jun 06, 2021 | Team Udayavani |

ಹುಬ್ಬಳ್ಳಿ: ಹೊಸೂರು ಚೆಕ್‌ಪೋಸ್ಟ್‌ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಉಪನಗರ ಠಾಣೆ ಪೇದೆ ಮೇಲೆ ಕಾರು ಚಾಲಕ ಹಲ್ಲೆ ಮಾಡಿದ ಘಟನೆ ಶನಿವಾರ ನಡೆದಿದ್ದು, ಪೊಲೀಸರು ಆತನನ್ನು ವಾಹನ ಸಮೇತ ವಶಕ್ಕೆ ಪಡೆದಿದ್ದಾರೆ.

Advertisement

ಕಾರು ಚಾಲಕ ಉತ್ತರ ಪ್ರದೇಶ ಗೋರಖಪುರದ ವೀರೇಂದ್ರ ಪ್ರಕಾಶ ಸಿಂಗ್‌ ಎಂಬಾತ ಪೇದೆ ಶ್ರೀಶೈಲ ನರಗುಂದ ಮೇಲೆ ಹಲ್ಲೆ ಮಾಡಿದ್ದಾನೆ. ಪೇದೆ ಶ್ರೀಶೈಲ ಅವರು ಚೆಕ್‌ಪೋಸ್ಟ್‌ ಬಳಿ ಕರ್ತವ್ಯದಲ್ಲಿದ್ದಾಗ ಮಾಸ್ಕ್ ಧರಿಸದೆ ಕಾರು ಚಲಾಯಿಸಿಕೊಂಡು ಬಂದ ವೀರೇಂದ್ರನನ್ನು ತಡೆದು ಪ್ರಯಾಣದ ಪರವಾನಗಿ ಕುರಿತು ವಿಚಾರಿಸಿದ್ದಾರೆ.

ಆಗ ಚಾಲಕನು ವಾಹನ ತಡೆಯಲು ನಿನಗೇನು ಅಧಿಕಾರವಿದೆ ಎಂದು ಕೇಳಿದ್ದಲ್ಲದೆ, ಮುಖ ಮತ್ತು ಭುಜಕ್ಕೆ ಹೊಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾನೆ. ತಕ್ಷಣ ಹೆಚ್ಚಿನ ಪೊಲೀಸರು ಸ್ಥಳಕ್ಕೆ ಆಗಮಿಸಿ ವೀರೇಂದ್ರನನ್ನು ಕಾರು ಸಹಿತ ವಶಕ್ಕೆ ಪಡೆದಿದ್ದಾರೆ. ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next