Advertisement

850 ಕೆ.ಜಿ. ಗೋಮಾಂಸ ಸಹಿತ ಐವರು ಪೊಲೀಸರ ವಶಕ್ಕೆ

09:48 AM Apr 17, 2018 | Team Udayavani |

ಬೆಳ್ತಂಗಡಿ: ಜಿಲ್ಲಾ ಅಪರಾಧ ಪತ್ತೆ ದಳದಿಂದ ಬೆಳ್ತಂಗಡಿ ತಾಲೂಕಿನಲ್ಲಿ ಎ.16ರಂದು ಬೆಳಗ್ಗೆ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಅಕ್ರಮ ಗೋಮಾಂಸ ಸಾಗಾಟವನ್ನು ಪತ್ತೆ ಹಚ್ಚಲಾಗಿದೆ. 

Advertisement

ಸುಮಾರು 850 ಕೆ.ಜಿ. ಗೋಮಾಂಸವನ್ನು ಸಾಗಿಸುತ್ತಿದ್ದ ಐವರನ್ನು ವಾಹನ ಸಹಿತ ವಶಕ್ಕೆ ಪಡೆಯಲಾಗಿದೆ. ಬಂಧಿತರು ಮತ್ತು ಸುಮಾರು 14.25 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಸಂಬಂಧಪಟ್ಟ ಠಾಣೆಗಳಿಗೆ ಹಸ್ತಾಂತರಿಸಲಾಗಿದೆ.

ದ.ಕ.ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ| ರವಿಕಾಂತೇಗೌಡ ಮಾರ್ಗ ದರ್ಶನದಲ್ಲಿ ಡಿಸಿಐಬಿ ಪೊಲೀಸ್‌ ನಿರೀಕ್ಷಕ ಸುನೀಲ್‌ ವೈ. ನಾಯ್ಕ ನೇತೃತ್ವÌದ ತಂಡ ಕಾರ್ಯಾಚರಣೆ ನಡೆಸಿ ಮಹಿಂದ್ರ ಝೈಲೋ, ಮಹಿಂದ್ರ ಬೊಲೇರೊ ವಾಹನ ಮತ್ತು ಸುಮಾರು 850 ಕೆ.ಜಿ. ದನದ ಮಾಂಸ ಹಾಗೂ ಐದು ಮೊಬೈಲ್‌ಗ‌ಳನ್ನು ವಶಪಡಿಸಿಕೊಂಡಿದ್ದಾರೆ.

ವಿವರ
ಡಿಸಿಐಬಿ ಸಿಬಂದಿ ಎ.16ರಂದು ಬೆಳಗ್ಗೆ 4 ಗಂಟೆ ಸುಮಾರಿಗೆ ಗಸ್ತುನಿರತ ವೇಳೆ ಗುರುವಾಯನಕೆರೆ ಜಂಕ್ಷನ್‌ ಬಳಿ  ಮಹಿಂದ್ರ  ಘೈಲೋ ಕಾರನ್ನು ಪರಿಶೀಲಿಸಿದಾಗ, ಅದರಲ್ಲಿ ಮೂವರು ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ವಾಹನದಲ್ಲಿದ್ದ ಮಂಗಳೂರು ಕುದ್ರೋಳಿ ಕರ್ಬಳ ರೋಡ್‌ ನಿವಾಸಿ ಮುಸ್ತಾಕ್‌ (50), ಬಂಟ್ವಾಳ ತಾಲೂಕು ಗೋಳ್ತಮಜಲು ನಿವಾಸಿ ಮಹಮದ್‌ ಕಬೀರ್‌ (38), ಬಂಟ್ವಾಳ ತಾಲೂಕು ತುಂಬೆ ವಾಟರ್‌ ಟ್ಯಾಂಕ್‌ ಬಳಿಯ ನಿವಾಸಿ ಅಬ್ದುಲ್‌ ಜಬ್ಟಾರ್‌ (45) ಅವರನ್ನು ಬಂಧಿಸಿ, 450 ಕೆ.ಜಿ. ಮಾಂಸವನ್ನು ವಶಕ್ಕೆ ಪಡೆದು ಬೆಳ್ತಂಗಡಿ ಠಾಣೆಗೆ ಹಸ್ತಾಂತರಿಸಲಾಗಿದೆ.

ಮತ್ತೂಂದು ಕಾರ್ಯಾಚರಣೆಯಲ್ಲಿ ಗುರುವಾಯನಕೆರೆ- ವೇಣೂರು ರಸ್ತೆಯ ಕುಕ್ಕೇಡಿ ಬಳಿ ಮಹೀಂದ್ರ ಬೊಲೇರೊ ವಾಹನವನ್ನು ತಡೆದು ಪರಿಶೀಲಿಸಿದಾಗ ಇಬ್ಬರು ಅಕ್ರಮವಾಗಿ ದನದ ಮಾಂಸ ಸಾಗಿಸುತ್ತಿರುವುದು ಪತ್ತೆಯಾಯಿತು. ವಾಹನದಲ್ಲಿದ್ದ ಬಂಟ್ವಾಳ ತಾಲೂಕು ಕಾರಿಂಜ ಬಳಿಯ ನಿವಾಸಿ ಎಂ.ಅಶ್ರಫ್‌ (39), ಮಂಗಳೂರು ಬಂದರು ಬಳಿಯ ರಝೀಮ್‌ (25) ಹಾಗೂ 400 ಕೆ.ಜಿ. ದನದ ಮಾಂಸವನ್ನು ವೇಣೂರು ಠಾಣೆಗೆ ಹಸ್ತಾಂತರಿಸಲಾಗಿದೆ. ಮಾಂಸವನ್ನು ಬೇಲೂರು ಕಡೆಯಿಂದ ಮಂಗಳೂರು ಕಡೆಗೆ ತರಲಾಗುತ್ತಿದ್ದು, ಹೆಚ್ಚಿನ ದರಕ್ಕೆ ಮಾರಾಟ ಮಾಡಲು ಸಾಗಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ.

Advertisement

ಮಾಂಸವನ್ನು ನ್ಯಾಯಾಲಯದ ಅನುಮತಿ ಪಡೆದು ದಫನ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಡಿಸಿಐಬಿ ಪೊಲೀಸ್‌ ನಿರೀಕ್ಷಕರಾದ ಸುನಿಲ್‌ ವೈ. ನಾಯಕ್‌, ಸಿಬಂದಿ ವಾಸು ನಾಯ್ಕ, ಲಕ್ಷ್ಮಣ ಕೆ.ಜಿ., ಉದಯ ರೈ, ಪ್ರವೀಣ ಕೆ., ಇಕ್ಬಾಲ್‌ ಎ.ಇ., ತಾರಾನಾಥ ಎಸ್‌., ಪಳನಿವೇಲು ಮತ್ತು ಚಾಲಕರಾದ ವಿಜಯ ಗೌಡ ಮೊದಲಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next