Advertisement

ಪೊಳಲಿ: ಸರಳ ಜಾತ್ರೆ ; ರಥೋತ್ಸವ ಸಂಪನ್ನ

10:52 PM Apr 11, 2021 | Team Udayavani |

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯು ಈ ಬಾರಿ ಕೊರೊನಾ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ನಡೆದಿದ್ದು, ರವಿವಾರ ಸಂಜೆ ಶ್ರೀ ದೇವಿಯ ರಥೋತ್ಸವ ನೆರವೇರಿತು.

Advertisement

ಶನಿವಾರ ಸಂಜೆ ಕಡೇ ಚೆಂಡಿನ ಉತ್ಸವ, ಚೆಂಡಿನ ಬಲಿ, ಆಳು ಪಲ್ಲಕ್ಕಿ ರಥ, ಬೆಳ್ಳಿ ರಥೋತ್ಸವ ನಡೆದಿತ್ತು. ಕೋವಿಡ್‌ ಮುನ್ನೆಚ್ಚರಿಕೆಗಳನ್ನು ವಹಿಸಿಕೊಂಡಿದ್ದು, ಮಾಸ್ಕ್ ಧರಿಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು ಜಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಭಕ್ತರಿಗೆ ಆಗಾಗ ಸೂಚನೆ ನೀಡಲಾಗುತ್ತಿತ್ತು.

ದೇವಸ್ಥಾನದ ಕುರಿತು ಮೃಣ್ಮಯ ಮೂರ್ತಿ ಕಿರುಚಿತ್ರವನ್ನು ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಅವರು ಶನಿವಾರ ಸಂಜೆ ಕ್ಷೇತ್ರದ ಆವರಣದಲ್ಲಿ ಬಿಡುಗಡೆಗೊಳಿಸಿದರು. ಆಡಳಿತ ಮೊಕ್ತೇಸರ ಡಾ| ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಯು.ತಾರಾನಾಥ ಆಳ್ವ, ಚೇರ ಸೂರ್ಯನಾರಾಯಣ ರಾವ್‌, ಪೊಳಲಿ ಮಾಧವ ಭಟ್‌, ಕೆ.ಕೆ.ಪೂಂಜ, ಸುಭಾಶ್‌ ಆಳ್ವ, ಚಿತ್ರದ ನಿರ್ಮಾಪಕ ವಾಮನ ಪೂಜಾರಿ ಕೈಕಂಬ ಮೊದಲಾದವರು ಉಪಸ್ಥಿತರಿದ್ದರು.

ರಥೋತ್ಸವದ ಹಿನ್ನೆಲೆಯಲ್ಲಿ ರವಿವಾರ ಬೆಳಗ್ಗಿನಿಂದಲೇ ಭಕ್ತರು ಆಗಮಿಸಿ ದೇವರ ದರ್ಶನ ಪಡೆದರು. ಕ್ಷೇತ್ರದಲ್ಲಿ ಸೇವೆ ಮಾಡುವುದಕ್ಕೆ ಅವಕಾಶ ನೀಡ ಲಾಗಿತ್ತು. ಜಾತ್ರೆಯ ಹಿನ್ನೆಲೆಯಲ್ಲಿ ಕಲ್ಲಂಗಡಿ ವ್ಯಾಪಾರ ಕಂಡುಬಂದಿದ್ದು, ಹೆಚ್ಚಿನ ಸಂತೆ ಮಳಿಗೆಗಳಿಗೆ ಅವಕಾಶ ವಿರಲಿಲ್ಲ. ರಾತ್ರಿವರೆಗೂ ಭಕ್ತರು ಆಗಮಿಸುತ್ತಲೇ ಇದ್ದು, ಗುಂಪು ಸೇರದಂತೆ ಪ್ರಕಟನೆ ನೀಡಲಾಗುತ್ತಿತ್ತು. ಕ್ಷೇತ್ರದ ಆಡಳಿತ ಮಂಡಳಿ, ಕಾರ್ಯ ನಿರ್ವ ಹಣಾಧಿಕಾರಿ, ತಂತ್ರಿ ವರ್ಗ, ಅರ್ಚಕರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next