Advertisement

ಪೊಳಲಿ: ಕೊಡಗು ಸಂತ್ರಸ್ತರಿಗೆ ನೆರವು

11:19 AM Aug 23, 2018 | Team Udayavani |

ಗುರುಪುರ: ಇಲ್ಲಿನ ಬಂಗ್ಲೆಗುಡ್ಡೆಯ ‘ಹೆಲ್ಪ್ಗೈಸ್‌’ ಸಂಘಟನೆಯ ಕಾರ್ಯಕರ್ತರು, ನೈಸ್‌ ಕ್ಯಾಟರರ್ ಇವರ ಮುಂದಾಳತ್ವದಲ್ಲಿ ಪೊಳಲಿ ದ್ವಾರದ ಬಳಿ ಕೊಡಗು ಸಂತ್ರಸ್ತರ ಪರವಾಗಿ ಸುಮಾರು 1.45 ಲಕ್ಷ ರೂ. ದೇಣಿಗೆ ಸಂಗ್ರಹಿಸಿ, ಒಟ್ಟು 5 ಲಕ್ಷ ರೂ. ವೆಚ್ಚದ ಸ್ವತ್ತು ಖರೀದಿಸಿ ಕೊಡಗಿಗೆ ಕಳುಹಿಸಲಾಯಿತು.

Advertisement

ಉದ್ಯಮಿ ದೀಪಕ್‌ ಕೊಟ್ಯಾನ್‌, ಹೆಲ್ಪ್ ಗೈಸ್‌ನ ಸದಸ್ಯರು, ಗುರುಪುರ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಹಸನ್‌ ಬಾವಾ, ಹಮೀದ್‌ ಬಂಗ್ಲೆಗುಡ್ಡೆ, ಇಜಾದ್‌, ಗ್ರಾ.ಪಂ. ಸದಸ್ಯ ದಾವೂದ್‌, ಕೆಡಿಬಿ ಸದಸ್ಯ ಜಿ. ಮೊಹಮ್ಮದ್‌ ಉಂಞಿ, ಹಮೀದ್‌, ಸಂಜೀವ ಪೂಜಾರಿ, ನಝೀರ್‌, ಮೈಯ್ಯದ್ದಿ, ಶಂಕರ್‌ ದೇಣಿಗೆ ಕಾರ್ಯಕ್ಕೆ ಕೈಜೋಡಿಸಿದರು. ಅಕ್ಕಿ, ಎಣ್ಣೆ, ಮಸಾಲೆ ಪದಾರ್ಥ, ಬಟ್ಟೆಬರೆ, ಪೇಸ್ಟ್‌, ಬ್ರಶ್‌, ಬಕೆಟು, ಈರುಳ್ಳಿ, ಬಟಾಟೆ, ಬೆಡ್‌ಶೀಟ್‌, ಚಾಪೆ, ಪಾತ್ರೆ ಮೊದಲಾದ ದಿನಬಳಕೆಯ ಸಾಮಗ್ರಿ ಒಳಗೊಂಡಿತು.

Advertisement

Udayavani is now on Telegram. Click here to join our channel and stay updated with the latest news.

Next