Advertisement

ಕೇಸರಿಬಾತ್‌ನಲ್ಲಿ ವಿಷ? ಘಟನೆಗೆ ಅನೈತಿಕ ಸಂಬಂಧ ಕಾರಣ ಶಂಕೆ

12:50 AM Jan 28, 2019 | |

ಚಿಕ್ಕಬಳ್ಳಾಪುರ: ಚಿಂತಾಮಣಿಯ ನಾರಸಿಂಹ ಪೇಟೆಯ ಗಂಗಮ್ಮ ಗುಡಿಯಲ್ಲಿ ಪ್ರಸಾದ ತಿಂದು ಇಬ್ಬರು ಮಹಿಳೆಯರ ಸಾವನ್ನಪ್ಪಿರುವ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದು, ವಿಷ ಪ್ರಸಾದ ವಿತರಣೆಯ ಹಿಂದೆ ಅನೈತಿಕ ಸಂಬಂಧದ ಶಂಕೆ ಮೂಡಿದೆ.

Advertisement

ದೇಗುಲದ ಸನಿಹವೇ ಇದ್ದ ಲೋಕೇಶ್‌ ಎಂಬ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆ ಲಕ್ಷ್ಮೀ ಜತೆ ಸೇರಿ ತನ್ನ ಪತ್ನಿಯನ್ನು ಹತ್ಯೆ ಮಾಡಲು ಈ ಸಂಚು ರೂಪಿಸಿ ಕೇಸರಿಬಾತ್‌ನಲ್ಲಿ ವಿಷವನ್ನು ಹಾಕಿಸಿದ್ದಾನೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ. ಅಲ್ಲದೆ ಸಂಚಿನ ಸೂತ್ರಧಾರಿಯಾಗಿದ್ದ ವ್ಯಕ್ತಿಯ ಅತ್ತೆ ಸರಸ್ವತಮ್ಮ ಕೂಡ ಮೃತರಾಗಿರುವುದು ಘಟನೆಗೆ ಮತ್ತಷ್ಟು ಪುಷ್ಠಿ ನೀಡಿದೆ. ತನ್ನ ಪತ್ನಿ ರಾಧಾಳನ್ನು ಹತ್ಯೆ ಮಾಡುವ ಸಲುವಾಗಿ ಕೇಸರಿಬಾತ್‌ನ ಕೆಲವು ಪೊಟ್ಟಣಗಳಿಗೆ ಮಾತ್ರ ವಿಷ ಹಾಕಿದ್ದು, ಉಳಿದವುಗಳನ್ನು ಹಾಗೆಯೇ ಹಂಚಲಾಗಿದೆ.

ಕಣ್ತಪ್ಪಿ ಒಂದು ವಿಷದ ಪೊಟ್ಟಣ ವಿತರಣೆ ಯಾಗಿದೆ ಎನ್ನಲಾಗಿದೆ. ಇದನ್ನು ತಿಂದು ಇಬ್ಬರು ಸಾವನ್ನಪ್ಪಿದ್ದಾರೆ. ಈ ಮಧ್ಯೆ, ವಿಷ ಪ್ರಸಾದ ಹಂಚಿಕೆ ಮಾಡಿದ್ದ ಲಕ್ಷ್ಮೀ ಹಾಗೂ ಆಕೆಯ ಸ್ನೇಹಿತೆ ಅಮರಾವತಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅಕ್ರಮ ಸಂಬಂಧದ ಶಂಕೆ
ನಿಟ್ಟಿನಲ್ಲೂ ತನಿಖೆ ನಡೆಸುತ್ತೇವೆ ಎಂದು ಜಿಲ್ಲಾ ಎಸ್ಪಿ ಕಾರ್ತಿಕ್‌ ರೆಡ್ಡಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next