Advertisement

ಕವಿ ಸಿದ್ದಪ್ಪ ಬಿದರಿಗೆ ಅಂಬಿಕಾತನಯದತ್ತ ಪ್ರಶಸ್ತಿ

06:40 AM Jan 25, 2018 | |

ಧಾರವಾಡ: ವರಕವಿ ದ.ರಾ.ಬೇಂದ್ರೆಯವರ 123ನೇ ಜನ್ಮದಿನ ಪ್ರಯುಕ್ತ ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ
ಟ್ರಸ್ಟ್‌ ಕೊಡುವ ಅಂಬಿಕಾತನಯದತ್ತ ರಾಷ್ಟ್ರೀಯ ಪ್ರಶಸ್ತಿ-2018ಗೆ ಬಾಗಲಕೋಟೆಯ ಬೀಳಗಿಯ ಜಾನಪದ ಕವಿ ಸಿದ್ದಪ್ಪ ಬಿದರಿ ಭಾಜನರಾಗಿದ್ದಾರೆ.

Advertisement

ಒಂದು ಲಕ್ಷ ರೂ. ನಗದು ಒಳಗೊಂಡ ಪ್ರಶಸ್ತಿಯನ್ನು ಜ.31ರಂದು ಸಂಜೆ 5:30 ಗಂಟೆಗೆ ಸಾಧನಕೇರಿ ಬೇಂದ್ರೆ
ಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಕವಿ,ನಾಡೋಜ ಡಾ. ಚೆನ್ನವೀರ ಕಣವಿ ಪ್ರದಾನ ಮಾಡಲಿದ್ದಾರೆ.

ಬೆಳಗಾವಿಯ ನಾಗನೂರು ರುದ್ರಾಕ್ಷಿಮಠದ ಸಿದಟಛಿರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ. ಕೃಷಿ ಕುಟುಂಬದಲ್ಲಿ
ಜನಿಸಿರುವ ಸಿದ್ದಪ್ಪ ಅಕ್ಷರಶಃ ಅನಕ್ಷರಸ್ಥರು. ಕೃಷಿ ಕಾಯಕದೊಂದಿಗೆ ನುಡಿ ಮುತ್ತಿನ ಮಾಲಿ ಮತ್ತು ಜಾನಪದ ಜವಾರಿ ಸಮಗ್ರ ಕವನ ಸಂಕಲನ ಸೇರಿ 25ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ ಎಂದು ಟ್ರಸ್ಟ್‌ ಅಧ್ಯಕ್ಷ ಡಾ.
ಡಿ.ಎಂ.ಹಿರೇಮಠ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next