Advertisement

ಪಿಎಂ ಭೇಟಿಗೆ ಅವಕಾಶವಿಲ್ಲ: ಕೇರಳ ಸಂಸದರ ಆಕ್ರೋಶ

03:45 AM Mar 11, 2017 | Team Udayavani |

ನವದೆಹಲಿ: ಕರ್ನಾಟಕದಲ್ಲಿರುವ ಬರ ವಿಚಾರ ಚರ್ಚಿಸಲು ಪ್ರಧಾನಿ ಮೋದಿ ಜತೆ ಭೇಟಿಗೆ ಅವಕಾಶ ಮಾಡಿಕೊಡುತ್ತಿಲ್ಲ ಎಂಬ ವಿಚಾರ ಕೆಲ ಸಮಯದ ಹಿಂದೆ ವಿವಾದಕ್ಕೆ ಕಾರಣವಾಗಿತ್ತು. ಅದೇ ಮಾದರಿಯ ವಿವಾದ ಕೇರಳ ಸಿಎಂ ಪಿಣರಾಯಿ ವಿಜಯನ್‌ಗೂ ಎದುರಾಗಿದೆ.

Advertisement

ರಾಜ್ಯದಲ್ಲಿನ ಬರ ಪರಿಸ್ಥಿತಿಯನ್ನು ಪ್ರಧಾನಿಗೆ ವಿವರಿಸಿ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಮನವಿ ಮಾಡಿಕೊಂಡಿದ್ದರು. ಈ ವಿಚಾರ ಚರ್ಚಿಸಲು ಪ್ರಧಾನಿ ಕಚೇರಿ ಭೇಟಿಯ ಸಮಯವನ್ನೇ ನಿಗದಿ ಮಾಡುತ್ತಿಲ್ಲ ಎಂದು ಕೇರಳ ಸಂಸದ ಕೆ.ಸುರೇಶ್‌ ಲೋಕಸಭೆಯಲ್ಲಿ ಶುಕ್ರವಾರ ಪ್ರಸ್ತಾಪಿಸಿದ್ದಾರೆ. ಈ ಆರೋಪವನ್ನು ಆಡಳಿತ ಪಕ್ಷದ ಸದಸ್ಯರು ತಿರಸ್ಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next