Advertisement

ಬಿಜೆಪಿ ಚುನಾವಣೆ ಗೆದ್ದಾಕ್ಷಣವೇ ಎಲ್ಲ ಟಿಎಂಸಿ ಶಾಸಕರು ಪಕ್ಷ ತೊರೆಯುತ್ತಾರೆ: ಮೋದಿ

08:38 AM Apr 30, 2019 | Sathish malya |

ಶ್ರೀರಾಮಪುರ, ಪಶ್ಚಿಮ ಬಂಗಾಲ : 2019ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಗೆದ್ದು ಅಧಿಕಾರಕ್ಕೆ ಬಂದ ತತ್‌ಕ್ಷಣವೇ ಎಲ್ಲ ಟಿಎಂಸಿ ಶಾಸಕರು ತಮ್ಮ ಪಕ್ಷ ತೊರೆದು ಬಿಜೆಪಿ ಸೇರಲಿದ್ದಾರೆ; ಈಗಾಗಲೇ ಅವರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸೋಮವಾರ ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

Advertisement

“ದೀದಿ, ಮೇ 23 ಲೋಕಸಭಾ ಚುನಾವಣಾ ಫ‌ಲಿತಾಂಶದ ದಿನ; ಅಂದು ಎಲ್ಲೆಡೆ ಕಮಲ ಅರಳಲಿದೆ ಮತ್ತು ಅಂದು ನಿಮ್ಮ ಪಕ್ಷದ ಶಾಸಕರೆಲ್ಲ ನಿಮ್ಮನ್ನು ತೊರೆದು ಓಡಲಿದ್ದಾರೆ; ಇವತ್ತು ಕೂಡ ನಿಮ್ಮ ಸುಮಾರು 40 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ” ಎಂದು ಪಿಎಂ ಮೋದಿ ಅವರಿಂದು ಇಲ್ಲಿ ನಡೆದ ಬೃಹತ್‌ ಚುನಾವಣಾ ರಾಲಿಯಲ್ಲಿ ಹೇಳಿದರು.

ಟಿಎಂಸಿ ಮುಖ್ಯಸ್ಥೆ ಪಶ್ಚಿಮ ಬಂಗಾಲದ ಜನರಿಗೆ ಓಟ್‌ ಹಾಕಲು ಕೂಡ ಬಿಡುತ್ತಿಲ್ಲ ಎಂದು ಮೋದಿ ವಾಕ್‌ ದಾಳಿ ನಡೆಸಿದರು. ಟಿಎಂಸಿ ಗೂಂಡಾಗಳು ಜನರಿಗೆ ಮತ ಹಾಕದಂತೆ ತಡೆಯುತ್ತಿದ್ದಾರೆ ಎಂದು ಮೋದಿ ಆರೋಪಿಸಿದರು.

ಹಿಂದೆಲ್ಲ ವಿರೋಧ ಪಕ್ಷಗಳು ಮೋದಿ ವಿರುದ್ಧ ಮಾತನಾಡುತ್ತಿದ್ದವು; ಇಂದು ಅವು ಇವಿಎಂ (ವಿದ್ಯುನ್ಮಾನ ಮತ ಯಂತ್ರ) ಗಳ ವಿರುದ್ಧವೂ ಆರೋಪ ಮಾಡುತ್ತಿವೆ; ಇದನ್ನು ಹೊರತುಪಡಿಸಿದರೆ ವಿಪಕ್ಷಗಳ ವ್ಯರ್ಥಾರೋಪದಲ್ಲಿ ಬೇರೇನೂ ಉಳಿಯುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next