Advertisement

ಅಭಿವೃದ್ಧಿ ರಾಜಕಾರಣ ಬೇಕೋ, ವೋಟ್‌ ಬ್ಯಾಂಕ್‌ ರಾಜಕಾರಣ ಬೇಕೋ? PM ಮೋದಿ

03:11 PM Oct 06, 2018 | udayavani editorial |

ಜೈಪುರ : ”ದೇಶದ ಜನರು ತಮಗೆ ಅಭಿವೃದ್ಧಿ ರಾಜಕಾರಣ ಬೇಕೋ ವೋಟ್‌ ಬ್ಯಾಂಕ್‌ ರಾಜಕಾರಣ ಬೇಕೋ ಎಂಬುದನ್ನು ತೀರ್ಮಾನಿಸಬೇಕಿದೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

Advertisement

ಸದ್ಯದಲ್ಲೆ ವಿಧಾನಸಭಾ ಚುನಾವಣೆಯನ್ನು ಕಾಣಲಿರುವ ರಾಜಸ್ಥಾನದಲ್ಲಿಂದು ಚುನಾವಣಾ ದಿನಾಂಕ ಪ್ರಕಟನೆಗೆ ಮುನ್ನವೇ ತಮ್ಮ ಪ್ರಚಾರಾಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ, ವೋಟ್‌ ಬ್ಯಾಂಕ್‌ ರಾಜಕಾರಣ ನಡೆಸುತ್ತಿರುವ ಕಾಂಗ್ರೆಸ್‌ ಪಕ್ಷದ ವಿರುದ್ಧ ಹರಿಹಾಯ್ದರು.

ಬಿಜೆಪಿಯು ಜನರ ಕ್ಷೇಮಾಭ್ಯುಯದೊಂದಿಗೆ ದೇಶದ ಆರ್ಥಿಕಾಭಿವೃದ್ಧಿಯನ್ನು ಸಾಧಿಸುವುದಕ್ಕೆ ಕಟಿಬದ್ಧವಾಗಿದ್ದು ಆ ದಿಶೆಯಲ್ಲಿ ಅದು ನಿರಂತರ ಪ್ರಯತ್ನಗಳನ್ನು ಮಾಡುತ್ತಲೇ ಇದೆ ಎಂದು ಹೇಳಿದರು. 

ವಿರೋಧ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ವಿಲಕ್ಷಣಕಾರಿ ಮೈತ್ರಿಗಳನ್ನು  ನಡೆಸುವಲ್ಲಿ ವ್ಯಸ್ತವಾಗಿವೆಯಾದರೆ ಬಿಜೆಪಿ ದೇಶವನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. 

ಕಾಂಗ್ರೆಸ್‌ ಪಕ್ಷ ವಂಶಾಡಳಿತೆಯ ಪಕ್ಷವಾಗಿ ಮುಂದುವರಿಯುತ್ತಿದೆ ಎಂದು ಟೀಕಿಸಿದ ಪ್ರಧಾನಿ ಮೋದಿ, “ರಾಜ್ಯದ (ರಾಜಸ್ಥಾನದ) ಮತ್ತು ದೇಶದ ಜನರು ನಮ್ಮ ಹೈಕಮಾಂಡ್‌ ಆಗಿದ್ದಾರೆ. ಕಾಂಗ್ರೆಸ್‌ ನ ಹೈಕಮಾಂಡ್‌ ಒಂದು ಕುಟುಂಬವಾಗಿದೆ’ ಎಂದು ಹೇಳಿದರು. 

Advertisement

ಕಾಂಗ್ರೆಸ್‌ ಪಕ್ಷ ತನ್ನ ಸ್ವಂತ ಹಿತಾಸಕ್ತಿಯ ರಕ್ಷಣೆಗಾಗಿ ಏನನ್ನೂ ಮಾಡಲು ಸಿದ್ಧವಿದೆ; ಇಂಥವರನ್ನು ನೀವು ಅಧಿಕಾರಕ್ಕೆ ತರಬೇಕೇ, ದೇಶವನ್ನು ಲೂಟುವುದಕ್ಕೆ ಅವರಿಗೆ ಅವಕಾಶ ಮಾಡಿಕೊಡಬೇಕೇ, ಅಭಿವೃದ್ಧಿಯ ಹಾದಿಯನ್ನು ವಿನಾಶದ ಹಾದಿಯನ್ನಾಗಿ ಮಾಡುವುದಕ್ಕೆ ಅವಕಾಶ ನೀಡಬೇಕೇ ? ಎಂದು ಪ್ರಶ್ನಿಸಿದರು.  

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next