Advertisement

ಕುಹಕಿಗಳ ಬಾಯಿಗೆ ಪಕೋಡ!

06:00 AM Jun 21, 2018 | Team Udayavani |

ವಡೋದರಾ: “ಪಕೋಡ ಮಾರಿಯಾದರೂ ನಿರುದ್ಯೋಗ ನೀಗಿಸಿಕೊಳ್ಳಬಹುದು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಕ್ಕೆ ಕಾಂಗ್ರೆಸ್‌ ಬಲುವಾಗಿ ಆಕ್ಷೇಪಿಸಿದ್ದರು. ಆದರೆ ಗುಜರಾತ್‌ನ ವಡೋದರಾದಲ್ಲಿರುವ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ಕಾರ್ಯಕರ್ತ ಪ್ರಧಾನಿಯವರ ಹೇಳಿಕೆ ಹಿಂದಿದ್ದ ಸತ್ಯವೇನೆಂದು ರುಜುವಾತು ಪಡಿಸಿದ್ದಾರೆ! ನಾರಾಯಣ್‌ಭಾಯ್‌ ರಜಪೂತ್‌ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕದ ಸದಸ್ಯ. ಹಿಂದಿ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ ಅವರು ಮೋದಿಯವರ ಪಕೋಡಾ ಭಾಷಣ ಕೇಳಿ, ಅದನ್ನು ಸವಾಲಾಗಿ ಸ್ವೀಕರಿಸಿದ್ದರು. 

Advertisement

ಸುಮ್ಮನೇ ಒಂದು ಪ್ರಯೋಗ ಮಾಡೋಣ ಎಂದು ಆರಂಭಿಸಿದ “ಶ್ರೀರಾಮ್‌ ದಾಲ್ವಾಡಾ ಸೆಂಟರ್‌’ ಎಂಬ ಬಜ್ಜಿ, ಪಕೋಡಾ ಮಾರುವ ಅಂಗಡಿಯ ವ್ಯಾಪಾರ ಕೆಲವೇ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯಿತು. ಇವರ ಪಕೋಡ ಘಮ ಘಮ ದೂರದ ಪ್ರಾಂತ್ಯಗಳಿಗೂ ಹಬ್ಬಿ ಇದೀಗ ವಡೋದರಾದಲ್ಲಿ 35 ಶಾಖೆಗಳನ್ನು “ಶ್ರೀರಾಮ್‌ ದಾಲ್ವಾಡ್‌ ಸೆಂಟರ್‌’ ಹೊಂದಿದೆ! ದಿನವೊಂದಕ್ಕೆ ಒಂದು ಅಂಗಡಿಯಿಂದ 200 ರೂ. ಲಾಭ ಇದ್ದು, ಪ್ರತಿ ದಿನ 35 ಅಂಗಡಿಗಳಿಂದ 7 ಸಾವಿರ ರೂ. ಲಾಭ ಬರುತ್ತದೆ. ಅಂದರೆ, ತಿಂಗಳಿಗೆ ಅಂದಾಜು 2 ಲಕ್ಷ ರೂ.ಗಳಿಗೂ ಮೀರಿದ ಆದಾಯ ಇವರದ್ದಾಗಿದೆ. ಇದು ನಾರಾಯಣ್‌ ಅವರ ಜೀವನವನ್ನು ಭದ್ರಗೊಳಿಸಿದೆ. ಈ ಮೂಲಕ, ಕುಹಕಿಗಳ ಬಾಯಿಗೆ ಪಕೋಡ ತುರುಕಿ ಸತ್ಯದ ಸಾಕ್ಷಾತ್ಕಾರವಾಗುವಂತೆ ಮಾಡಿದ್ದಾರೆ ನಾರಾಯಣ್‌.

Advertisement

Udayavani is now on Telegram. Click here to join our channel and stay updated with the latest news.

Next