Advertisement

72 ರಾಜ್ಯಸಭಾ ಸದಸ್ಯರ ಬೀಳ್ಕೊಡುಗೆ : ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡಿ ಎಂದ ಪ್ರಧಾನಿ

12:36 PM Mar 31, 2022 | Team Udayavani |

ನವದೆಹಲಿ: ದೇಶದ ಜನರೊಂದಿಗೆ ಸದನದಲ್ಲಿ ಗಳಿಸಿದ ಅನುಭವಗಳನ್ನು ಹಂಚಿಕೊಂಡು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುವಂತೆ ಪ್ರಧಾನಿ ರಾಜ್ಯಸಭೆಯಿಂದ ನಿವೃತ್ತರಾಗುತ್ತಿರುವ ಸಂಸದರಲ್ಲಿ ನರೇಂದ್ರ ಮೋದಿ ಅವರು ಗುರುವಾರ ಒತ್ತಾಯಿಸಿದ್ದಾರೆ.

Advertisement

ಜುಲೈವರೆಜಿನಾ ಅವಧಿಯಲ್ಲಿ ನಿವೃತ್ತರಾಗಲಿರುವ 72 ರಾಜ್ಯಸಭಾ ಸದಸ್ಯರಿಗೆ ವಿದಾಯ ಹೇಳಿದ ಪ್ರಧಾನಿ, ಅನುಭವಕ್ಕೆ ತನ್ನದೇ ಆದ ಪ್ರಾಮುಖ್ಯತೆ ಇದೆ ಮತ್ತು ಸಂಸದರು ಅದನ್ನು ರಾಷ್ಟ್ರದ ಸೇವೆಯಲ್ಲಿ ಮುನ್ನಡೆಸಬೇಕು ಎಂದರು.

“ಅನುಭವಿ ಜನರು ಹೋದಾಗ, ಉಳಿದವರ ಜವಾಬ್ದಾರಿ ಹೆಚ್ಚಾಗುತ್ತದೆ ಮತ್ತು ಅವರು ಸದನವನ್ನು ಮುಂದಕ್ಕೆ ಕೊಂಡೊಯ್ಯಬೇಕು.ಈ ಸದನದ ಸದಸ್ಯರಾಗಿ ಸಂಗ್ರಹಿಸಿದ ಅನುಭವವನ್ನು ದೇಶದ ಎಲ್ಲಾ ನಾಲ್ಕು ದಿಕ್ಕುಗಳಿಗೆ ಕೊಂಡೊಯ್ಯಬೇಕು. ನಮ್ಮ ಸದಸ್ಯರಿಗೆ ಸಾಕಷ್ಟು ಅನುಭವವಿದೆ.ಕೆಲವೊಮ್ಮೆ ಅನುಭವವು ಶೈಕ್ಷಣಿಕ ಜ್ಞಾನಕ್ಕಿಂತ ಹೆಚ್ಚಿನ ಶಕ್ತಿಯನ್ನು ಹೊಂದಿರುತ್ತದೆ” ಎಂದರು.

“ಭಾರತದ ಸ್ವಾತಂತ್ರ್ಯದ 75 ನೇ ವರ್ಷದಲ್ಲಿ, ನಮ್ಮ ಮಹಾನ್ ಪುರುಷರು ನಮಗೆ ಬಹಳಷ್ಟುಕೆ ಕೊಡುಗೆ ನೀಡಿದ್ದಾರೆ ಮತ್ತು ಈಗ ರಾಷ್ಟ್ರಕ್ಕೆ ನಮ್ಮ ಕೊಡುಗೆಯನ್ನು ನೀಡುವುದು ನಮ್ಮ ಜವಾಬ್ದಾರಿಯಾಗಿದೆ” ಎಂದು ಪ್ರಧಾನಮಂತ್ರಿ ಹೇಳಿದರು.

“ನಮ್ಮ ಮುಂಬರುವ ಪೀಳಿಗೆಗೆ ಸ್ಫೂರ್ತಿ ನೀಡುವಂತೆ ನಾನು ನಿವೃತ್ತಿಯಾಗುವ ಸದಸ್ಯರನ್ನು ಕೋರುತ್ತೇನೆ” ಎಂದು ಅವರು ಹೇಳಿದರು.

Advertisement

72 ಮಂದಿ ನಿವೃತ್ತರಾದವರಲ್ಲಿ, 65 ನಿವೃತ್ತ ಸದಸ್ಯರು 19 ರಾಜ್ಯಗಳನ್ನು ಪ್ರತಿನಿಧಿಸುತ್ತಿದ್ದಾರೆ ಮತ್ತು ಏಳು ಮಂದಿ ನಾಮನಿರ್ದೇಶಿತ ಸದಸ್ಯರು ಸೇರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next