Advertisement

ಪ್ರಧಾನಿ ಮೋದಿ ಈವರೆಗೆ ಯಾವ ಗಡಿಭಾಗದ ಯೋಧರ ಜತೆ ದೀಪಾವಳಿ ಆಚರಿಸಿದ್ದಾರೆ ಗೊತ್ತಾ?

06:49 PM Nov 14, 2020 | Nagendra Trasi |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಈ ಬಾರಿಯೂ ದೇಶದ ಗಡಿಭಾಗದಲ್ಲಿರುವ ಯೋಧರ ಜತೆ ದೀಪಾವಳಿಯನ್ನು ಆಚರಿಸಿದ್ದಾರೆ. ರಾಜಸ್ಥಾನದ ಜೈಸಲ್ಮೇರ್ ನಲ್ಲಿ ಶನಿವಾರ(ನವೆಂಬರ್ 14, 2020) ಯೋಧರ ಜತೆ ದೀಪಾವಳಿ ಆಚರಿಸಿದ ಪ್ರಧಾನಿ ಮೋದಿ, ಯೋಧರ ಮುಖದಲ್ಲಿ ನಗು ಮೂಡಿದರೆ ನಮಗೂ ಸಂತೋಷ. ಪ್ರತಿವರ್ಷ ನಿಮ್ಮ(ಯೋಧರ) ಜತೆ ದೀಪಾವಳಿ ಆಚರಿಸಿದರೆ ನನಗೂ ಸಂತೋಷ ಎಂದು ಹೇಳಿದರು.

Advertisement

ನರೇಂದ್ರ ಮೋದಿ ಅವರು ಪ್ರಧಾನಿ ಹುದ್ದೆಗೆ ಏರಿದ ವರ್ಷದಿಂದ ಹಿಡಿದು ಈವರೆಗೂ ಪ್ರತಿವರ್ಷವೂ ಅವರು ದೇಶದ ವಿವಿಧ ಗಡಿಭಾಗದಲ್ಲಿ ಯೋಧರ ಜತೆ ದೀಪಾವಳಿಯನ್ನು ಆಚರಿಸಿದ್ದಾರೆ. ಹೀಗೆ ಅವರು ಪ್ರತಿವರ್ಷ ಯಾವ ಭಾಗದಲ್ಲಿ ದೀಪಾವಳಿ ಆಚರಿಸಿದ್ದಾರೆ ಎಂಬ ಸಂಕ್ತಿಪ್ತ ನೋಟ ಇಲ್ಲಿದೆ.

ಪ್ರತಿವರ್ಷ ಯೋಧರನ್ನು ಭೇಟಿಯಾಗಿ ಅವರ ಕುಶಲೋಪರಿ ನಡೆಸಿ ಅವರಿಗೆ ಸಿಹಿ ತಿನ್ನಿಸಿ ದೀಪಾವಳಿ ಆಚರಿಸುವುದು ಪ್ರಧಾನಿ ಮೋದಿ ಅವರ ಸಂಪ್ರದಾಯವಾಗಿದೆ. ಈ ಹಿಂದೆ ಅವರು ಜಮ್ಮು-ಕಾಶ್ಮೀರ, ಉತ್ತರಾಖಂಡ್ ಪ್ರದೇಶದಲ್ಲಿಯೂ ಯೋಧರ ಜತೆ ದೀಪಾವಳಿ ಆಚರಿಸಿದ್ದರು.

2014ರಲ್ಲಿ ಸಿಯಾಚಿನ್:

ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದ ನರೇಂದ್ರ ಮೋದಿ ಅವರು ತಮ್ಮ ಮೊದಲ ದೀಪಾವಳಿ ಹಬ್ಬವನ್ನು ಜಗತ್ತಿನ ಅತೀ ದೊಡ್ಡ ಯುದ್ಧ ಭೂಮಿ ಎಂದೇ ಹೆಸರಾಗಿರುವ ಸಿಯಾಚಿನ್ ಗ್ಲೇಸಿಯರ್ ಗೆ ಭೇಟಿ ನೀಡಿ ಯೋಧರ ಜತೆ ಆಚರಿಸಿಕೊಂಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.

Advertisement

ಇದನ್ನೂ ಓದಿ:ಒಣ ಹಣ್ಣಿನಿಂದ ಮೂಡಿತು 5 ಕೆ.ಜಿ.ತೂಕದ ದೀಪಾವಳಿಯ ಗೂಡುದೀಪ

2015ರಲ್ಲಿ ಪಂಜಾಬ್ ಗಡಿ:

2015ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಂಜಾಬ್ ಗಡಿಭಾಗದಲ್ಲಿರುವ ಯೋಧರನ್ನು ಭೇಟಿಯಾಗಿ ಅವರ ಯೋಗ ಕ್ಷೇಮ ವಿಚಾರಿಸುವುದರೊಂದಿಗೆ ದೀಪಾವಳಿ ಹಬ್ಬವನ್ನು ಆಚರಿಸಿದ್ದರು.

2016ರಲ್ಲಿ ಟಿಬೆಟ್ ಗಡಿಭಾಗ:

2016ರಲ್ಲಿಯೂ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರಾಖಂಡ್ ನ ಚಮೋಲಿ ಜಿಲ್ಲೆಯಲ್ಲಿ ಭಾರತ-ಚೀನಾ ಗಡಿಭಾಗದಲ್ಲಿ ಇಂಡಿಯನ್ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಪಡೆಯ ಜೊತೆ ದೀಪಾವಳಿ ಆಚರಿಸುವ ಮೂಲಕ ಸಂಭ್ರಮವನ್ನು ಹಂಚಿಕೊಂಡಿದ್ದರು.

2017ರಲ್ಲಿ ಗ್ಯುರೇಜ್:

2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು-ಕಾಶ್ಮೀರದ ಗ್ಯುರೇಜ್ ಸೆಕ್ಟರ್ ಗೆ ಭೇಟಿ ನೀಡಿ ಯೋಧರ ಜತೆ ಮಾತುಕತೆ ನಡೆಸಿ, ಸಿಹಿ ಹಂಚುವ ಮೂಲಕ ದೀಪಾವಳಿಯನ್ನು ಆಚರಿಸಿದ್ದರು.

ಇದನ್ನೂ ಓದಿ:ಇರಾನ್ ನಲ್ಲಿ ಇಸ್ರೇಲ್ ಗೂಢಚರರಿಂದ ಅಲ್ ಖೈದಾ ಮುಖ್ಯ ಕಮಾಂಡರ್ ಹತ್ಯೆ: ವರದಿ

2018ರಲ್ಲಿ ಉತ್ತರಾಖಂಡ್:

2018ರಲ್ಲಿಯೂ ಪ್ರಧಾನಿ ಮೋದಿ ಅವರು ಉತ್ತರಾಖಂಡದಲ್ಲಿರುವ ಚೀನಾ ಗಡಿಭಾಗದಲ್ಲಿ ಐಟಿಬಿಪಿ ಯೋಧರ ಜತೆ ಗಡಿಭಾಗದ ಮಾಹಿತಿ ಪಡೆದು, ಕುಶಲೋಪರಿ ವಿಚಾರಿಸಿ ದೀಪಾವಳಿಯನ್ನು ಆಚರಿಸಿಕೊಂಡಿದ್ದರು.

2019ರಲ್ಲಿ ರಜೌರಿ:

ಕಳೆದ ವರ್ಷ ಪ್ರಧಾನಿ ಮೋದಿ ಅವರು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370ನ್ನು ರದ್ದುಪಡಿಸಿದ್ದ ನಂತರ ಮೊದಲ ಬಾರಿಗೆ ರಜೌರಿ ಜಿಲ್ಲೆಯ ಗಡಿಭಾಗಕ್ಕೆ ಭೇಟಿ ನೀಡಿ ಯೋಧರ ಜತೆ ದೀಪಾವಳಿ ಆಚರಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next