Advertisement

ದೇಶಕ್ಕಾಗಿ ಕೊಡುಗೆ ನೀಡಿದವರನ್ನು ನಿರಾಕರಿಸಿದರೆ ದೇಶ ಅಭಿವೃದ್ಧಿಯಾಗಲ್ಲ : ಮೋದಿ

03:58 PM Mar 08, 2021 | Team Udayavani |

ನವದೆಹಲಿ : ದೇಶಕ್ಕಾಗಿ ಕೊಡುಗೆ ನೀಡಿದವರನ್ನು ನಿರಾಕರಿಸಿದರೆ ದೇಶವು ಅಭಿವೃದ್ಧಿಯತ್ತ ಸಾಗುವುದಿಲ್ಲ. ಪ್ರತಿಯೊಬ್ಬರ ಕೊಡುಗೆಗಳನ್ನು ಸ್ವೀಕರಿಸಿ ಗೌರವಿಸಿದಾಗ ಮಾತ್ರ ದೇಶ ಮುಂದುವರೆಯಲು ಸಾಧ್ಯ. ನಾವು ಈ ಮಂತ್ರವನ್ನು ಪಾಲಿಸಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

Advertisement

ಭಾರತವು ಸ್ವಾತಂತ್ರ್ಯ ಪಡೆದು 75 ವರ್ಷಗಳಾದ ಹಿನ್ನೆಲೆಯಲ್ಲಿ ಮಾತನಾಡಿರುವ ಮೋದಿ, ಭಾರತವು ಸದ್ಯ ಮಾಡುತ್ತಿರುವ ಸಾಧನೆ ಮತ್ತು ಕೆಲಸಗಳನ್ನು ಈ ಹಿಂದೆ ಊಹಿಸಲೂ ಸಾಧ್ಯವಾಗಿರಲಿಲ್ಲ.

ಸ್ವಾತಂತ್ರ್ಯ ಪಡೆದು 75 ವರ್ಷಗಳ ಈ ಪಯಣದಲ್ಲಿ ನಾವು ಇಲ್ಲಿಗೆ ಬಂದು ತಲುಪಿದ್ದೇವೆ. ದೇಶದ ಈ ಪಯಣಕ್ಕೆ ಹಲವಾರು ಜನರ ಕೊಡುಗೆ ಇದೆ ಎಂದು ನರೇಂದ್ರ ಮೋದಿ ಹೇಳಿದ್ದಾರೆ.

1947 ರ ನಂತ್ರ ನಮ್ಮ ಸಾಧನೆಗಳನ್ನು ಪ್ರಪಂಚಕ್ಕೆ ತೋರಿಸುವ ಅವಕಾಶ ನಮ್ಮದಾಗಿದೆ. ಸ್ವಾತಂತ್ರ್ಯ ಪಡೆದು 75 ವರ್ಷಗಳಾದ ಸಂಭ್ರಮವನ್ನು, ಸ್ವಾತಂತ್ರ ಹೋರಾಟದ ಕ್ಷಗಳಿಂದ ಸ್ಪೂರ್ತಿ ಪಡೆಯುತ್ತ ಆಚರಿಸೋಣ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next