Advertisement

ಸಿಂಗಾಪುರದ ಬಾಂಧವ್ಯ ಹತ್ತಿರದ್ದು

03:40 AM Jun 01, 2018 | Team Udayavani |

ಸಿಂಗಾಪುರ/ಕೌಲಾಲಂಪುರ: ಮೂರು ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಗುರುವಾರ ಸಿಂಗಾಪುರಕ್ಕೆ ತಲುಪಿದ್ದಾರೆ. ಅಲ್ಲಿ ಭಾರತೀಯ ಉದ್ಯಮಿಗಳ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಅವರು, ಎರಡೂ ದೇಶಗಳ ನಡುವಿನ ಬಾಂಧವ್ಯ ಅತ್ಯಂತ ನಿಕಟವಾಗಿದೆ. ರಕ್ಷಣಾ ಕ್ಷೇತ್ರದಲ್ಲಿನ ಸಂಬಂಧ ದೃಢವಾಗಿವೆ ಎಂದು ಹೇಳಿದ್ದಾರೆ.

Advertisement

‘ಪರಸ್ಪರರ ನಡುವೆ ಯಾವುದೇ ರೀತಿಯ ಬಿಕ್ಕಟ್ಟು, ಸಂಶಯಗಳು ಇಲ್ಲ. ಸಮಾನ ಹಿತಾಸಕ್ತಿ ಮತ್ತು ದೃಷ್ಟಿಕೋನದ ಬಾಂಧವ್ಯ ನಮ್ಮದಾಗಿದೆ’ ಎಂದಿದ್ದಾರೆ ಮೋದಿ. ಭಾರತ ತನ್ನ ಮಾರುಕಟ್ಟೆಯನ್ನು ಜಗತ್ತಿಗೆ ತೆರೆದಿಟ್ಟಾಗ ಸಿಂಗಾಪುರ ಮೊದಲು ಸಹಭಾಗಿತ್ವಕ್ಕೆ ಹಸ್ತಚಾಚಿತು. ಆಸಿಯಾನ್‌ ರಾಷ್ಟ್ರಗಳ ಜತೆಗಿನ ಸಂಬಂಧ ವೃದ್ಧಿಗೆ ಸೇತುವೆಯಾಯಿತು ಎಂದು ಶ್ಲಾಘಿಸಿದ್ದಾರೆ. ಇದೇ ವೇಳೆ ಮೋದಿ, ಭಾರತದ 3ಡಿಜಿಟಲ್‌ ಪಾವತಿ ಆ್ಯಪ್‌ ಗಳನ್ನು ಉದ್ಘಾಟಿಸಿದ್ದಾರೆ.

ಮಲೇಷ್ಯಾ ಪ್ರಧಾನಿಗೆ ಶುಭಾಶಯ: ಇಂಡೋನೇಷ್ಯಾದಿಂದ ಸಿಂಗಾಪುರಕ್ಕೆ ತೆರಳುವ ಮಾರ್ಗ ಮಧ್ಯೆ ಮೋದಿ ಮಲೇಷ್ಯಾಕ್ಕೆ ಭೇಟಿ ನೀಡಿದ್ದಾರೆ. ಕೌಲಾಂಲಪುರದಲ್ಲಿ ಪ್ರಧಾನಿ ಮಹಾತಿರ್‌ ಮೊಹಮ್ಮದ್‌ (92) ಇತ್ತೀಚಿನ ಚುನಾವಣೆಯಲ್ಲಿ ಜಯ ಸಾಧಿಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಕ್ಷಿಪ್ರ ಭೇಟಿ ಇದಾಗಿದ್ದು, ಆರ್ಥಿಕ ಮತ್ತು ಸಾಂಸ್ಕೃತಿಕ ಬಾಂಧವ್ಯಗಳನ್ನು ವೃದ್ಧಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next