Advertisement

ಕುಂಭ ಮೇಳ ಶೌಚ ಕಾರ್ಮಿಕರ ಕಲ್ಯಾಣ ನಿಧಿಗೆ PM ಮೋದಿ 21 ಲಕ್ಷ ದೇಣಿಗೆ

01:35 PM Mar 06, 2019 | Team Udayavani |

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ತಮ್ಮ ಸ್ವಂತ ಉಳಿತಾಯದ ಹಣದಿಂದ ಕುಂಭ ಮೇಳದ ಶೌಚ ಕಾರ್ಮಿಕರ ಕಲ್ಯಾಣ ನಿಧಿಗೆ 21 ಲಕ್ಷ ರೂ. ದೇಣಿಗೆ ನೀಡಿದ್ದಾರೆ ಎಂದು ಅವರ ಕಾರ್ಯಾಲಯ ಇಂದು ಬುಧವಾರ ತಿಳಿಸಿದೆ.

Advertisement

ಪ್ರಧಾನಿ ಮೋದಿ ಅವರು ಈಚೆಗೆ ಕುಂಭ ಮೇಳದಲ್ಲಿ ಶುಚಿತ್ವವನ್ನು ಕಾಪಿಡಲು ಅಪಾರವಾಗಿ ಶ್ರಮಿಸಿದ್ದ ಶೌಚ ಕಾರ್ಮಿಕರ ಕಾಲು ತೊಳೆದು ಸಮ್ಮಾನಿಸಿದ್ದ$ªರು. 

ಶೌಚ ಕಾರ್ಮಿಕರನ್ನು ನಿಜವಾದ ಕರ್ಮ ಯೋಗಿಗಳೆಂದು ಗುಣಗಾನ ಮಾಡಿದ್ದ ಮೋದಿ, ನಿಮ್ಮ ಅನುಪಮ ಕಾಣಿಕೆಯನ್ನು ಎಲ್ಲೆಡೆ ಕೊಂಡಾಡಲಾಗುತ್ತಿದೆ ಎಂದು ಹೇಳಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next