Advertisement

ಕೇರಳ ಚರ್ಚ್‌ ವಿವಾದ ಪರಿಹಾರಕ್ಕೆ ಮಧ್ಯ ಪ್ರವೇಶಿಸಿದ ಪಿಎಂ ಮೋದಿ

01:18 AM Dec 30, 2020 | Team Udayavani |

ಕೊಚ್ಚಿ/ತಿರುವನಂತಪುರ: ಕೇರಳದ ಹಳೆಯ ಚರ್ಚ್‌ಗಳಲ್ಲಿ ಒಂದಾಗಿರುವ ಸಿರಿಯನ್‌ ಸಮುದಾಯದ ನಡುವೆ ಉಂಟಾಗಿರುವ ವಿವಾದ ಬಗೆಹರಿಸಲು ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ಮುಂದಾಗಿದ್ದಾರೆ. ಹೊಸದಿಲ್ಲಿಯಲ್ಲಿ ಜಾಕೋಬೈಟ್‌ ಸಿರಿಯನ್‌ ಕ್ರಿಶ್ಚಿಯನ್‌ ಚರ್ಚ್‌ನ ಮೂವರು ಪ್ರತಿನಿಧಿಗಳ ಜತೆ ಮಾತುಕತೆ ನಡೆಸಿದ್ದಾರೆ. ಸೋಮವಾರ ಅವರು ಮಲಂಕರಾ ಆರ್ಥಡಾಕ್ಸ್‌ ಸಿರಿಯನ್‌ ಚರ್ಚ್‌ನ ಪ್ರತಿನಿಧಿಗಳ ಜತೆಗೆ ಸಮಾಲೋಚನೆ ನಡೆಸಿದ್ದರು. 1 ಸಾವಿರ ಚರ್ಚ್‌ಗಳ, ಅವುಗಳಿಗೆ ಸಂಬಂಧಿಸಿದ ಆಸ್ತಿಯ ಮಾಲಕತ್ವದ ಬಗ್ಗೆ 2017ರಲ್ಲಿ ಸುಪ್ರೀಂ ನೀಡಿದ್ದ ತೀರ್ಪನ್ನು ಅನುಷ್ಠಾನ ಗೊಳಿಸುವ ವಿಚಾರದಲ್ಲಿ ಎರಡೂ ಚರ್ಚ್‌ ಗಳ ನಡುವೆ ಭಿನ್ನಾಭಿಪ್ರಾಯ ಭುಗಿಲೆದ್ದಿದೆ. ಮಿಜೋರಾಂ ರಾಜ್ಯಪಾಲ ಪಿ.ಎಸ್‌.ಶ್ರೀಧರ್‌ ಪಿಳ್ಳೆ ಈ ಮಾತುಕತೆಗೆ ಅವಕಾಶ ಮಾಡಿದ್ದರು. ಈ ಬಗ್ಗೆ ಹೇಳಿಕೆ ನೀಡಿದ ಜಾಕೋಬೈಟ್‌ ಗುಂಪು ಪ್ರಧಾನಿ ಯವರು ಮಧ್ಯಪ್ರವೇಶ ಮಾಡಿರುವುದು ಸಮರ್ಥನೀಯವೇ ಆಗಿದೆ ಎಂದಿದೆ. ಅವರು ಸಮುದಾಯ ಹೊಂದಿರುವ ಹಕ್ಕುಗಳನ್ನು ರಕ್ಷಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದೆ.

Advertisement

ಸಿಎಂ ಸ್ವಾಗತ: ಪ್ರಧಾನಿಯವರೇ ಹಳೆಯ ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಮಧ್ಯಪ್ರವೇಶಿಸಿ ಮಾತುಕತೆ ನಡೆಸುತ್ತಿರು ವುದನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸ್ವಾಗತಿಸಿದ್ದಾರೆ. ಇದರಿಂದ ಬಿಕ್ಕಟ್ಟು ಶೀಘ್ರದಲ್ಲಿಯೇ ಮುಕ್ತಾಯ ಕಾಣಲಿದೆ. ಈ ವಿಚಾರದಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next