Advertisement

ಆತ್ಮನಿರ್ಭರ ಭಾರತ್ ಸ್ವಯಂಪೂರ್ಣ ಯೋಜನೆ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ

05:25 PM Oct 24, 2021 | Team Udayavani |

ಪಣಜಿ: ಆತ್ಮನಿರ್ಭರ ಭಾರತ್ ಸ್ವಯಂಪೂರ್ಣ ಗೋವಾ ಯೋಜನೆಯ ಅಡಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗೋವಾ ರಾಜ್ಯದ ಸ್ವಯಂಪೂರ್ಣ ಮಿತ್ರ ನಗರಾಧ್ಯಕ್ಷ, ಪಂಚಾಯತಿ ಅಧ್ಯಕ್ಷ, ಪಂಚಸದಸ್ಯ, ಹಾಗೂ ಜನತೆಯೊಂದಿಗೆ ವೀಡಿಯೊ ಸಂವಾದ ನಡೆಸಿದರು.

Advertisement

ವಾಸ್ಕೊದ ಮುರಗಾಂವ ನಗರಪಾಲಿಕೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

198 ಪಂಚಾಯತಿ ಹಾಗೂ 14 ಪಾಲಿಕೆಗಳಲ್ಲಿ ಸ್ವಯಂಪೂರ್ಣ ಮಿತ್ರರನ್ನು ನೇಮಕ ಮಾಡಲಾಗಿತ್ತು. 2 ಅಕ್ಟೋಬರ್ 2020 ರಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸರ್ಕಾರದ ವಿವಿಧ ಯೋಜನೆಗಳನ್ನು ನೇರವಾಹಿ ಜನತೆಯ ಬಳಿ ತಲುಪಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಎಲ್ಲ ಯೋಜನೆಗಳಿಗೆ ಸಂಬಂಧಿಸಿದಂತೆ ಮತ್ತು ಸರ್ಕಾರ ಹ್ಮಿಕೊಂಡ ವಿವಿಧ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ವೀಡಿಯೊ ಸಂವಾದ ಕಾರ್ಯಕ್ರಮದಲ್ಲಿ  ಪ್ರಧಾನಿ ನರೇಂದ್ರ ಮೋದಿಯವರು ಸಂವಾದ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next