Advertisement

Letter; ನ್ಯಾಯಪತ್ರ ಬಗ್ಗೆ ವಿವರಿಸಲು ಪಿಎಂ ಮೋದಿ ಸಮಯ ಕೇಳಿದ ಖರ್ಗೆ

01:23 AM Apr 26, 2024 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ ಪ್ರಣಾಳಿಕೆ “ನ್ಯಾಯ ಪತ್ರ’ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

Advertisement

ಕಾಂಗ್ರೆಸ್‌ ಪ್ರಣಾಳಿಕೆ ಕುರಿತು ನಿಮ್ಮ ಸಲಹೆಗಾರರು ನಿಮಗೆ ತಪ್ಪು ಮಾಹಿತಿ ನೀಡಿದ್ದಾರೆ. ಪ್ರಣಾಳಿಕೆಯಲ್ಲಿ ಇಲ್ಲದ್ದನ್ನೆಲ್ಲ ಹೇಳಿಕೊಟ್ಟಿದ್ದಾರೆ. ಎಲ್ಲ ವರ್ಗದ, ಜಾತಿಗಳು ಮತ್ತು ಸಮುದಾಯದ ಯುವಜನ, ಮಹಿಳೆಯರು, ರೈತರು, ಶ್ರಮಿಕರು ಮತ್ತು ಸೌಲಭ್ಯವಂಚಿತರಿಗೆ ನ್ಯಾಯ ಒದಗಿಸುವುದೇ ನ್ಯಾಯಪತ್ರದ ಗುರಿಯಾಗಿದೆ. ಆದರೆ ಅದರಿಂದ ಕೆಲವೇ ಪದಗಳನ್ನು ಎತ್ತಿ ಹೊಸ ವಾದ ಸೃಷ್ಟಿಸಿ ಕೋಮು ವಿಭಜಿಸುವುದು ನಿಮಗೆ ಅಭ್ಯಾಸವಾಗಿದೆ.

ಇದು ಪ್ರಧಾನಿ ಹುದ್ದೆಗೆ ಶೋಭೆಯಲ್ಲ ಎಂದು 2 ಪುಟಗಳ ಪತ್ರದಲ್ಲಿ ಖರ್ಗೆ ತಿಳಿಸಿದ್ದಾರೆ. ಮೊದಲ ಹಂತದ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ ಆಗಿರುವ ವಿಚಾರ ಗೊತ್ತಾಗುತ್ತಿದ್ದಂತೆ ನೀವು ಮತ್ತು ನಿಮ್ಮ ಪಕ್ಷದ ನಾಯಕರು ಬಳಸುತ್ತಿರುವ ಭಾಷೆಯು ಆಶ್ಚರ್ಯ ತರಿ ಸಿಲ್ಲ. ನಿಮ್ಮ ಸೂಟ್‌-ಬೂಟ್‌ನ ಸರಕಾರವು ಕೇವಲ ಉದ್ಯೋಗಪತಿಗಳಿಗೆ ಕೆಲಸ ಮಾಡುತ್ತಿದೆ. ಅವರ ತೆರಿಗೆಯನ್ನು ಕಡಿಮೆ ಮಾಡಿದ್ದರೆ, ಸಂಬಳದಾರರು ಹೆಚ್ಚಿನ ತರಿಗೆಯನ್ನು ಪಾವತಿಸುತ್ತಿದ್ದಾರೆಂದು ಖರ್ಗೆ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next