Advertisement

ಆ್ಯಂಬ್ಯುಲೆನ್ಸ್‌ಗೆ ತೆರಳಲು ಅವಕಾಶ ಕೊಟ್ಟ ಪ್ರಧಾನಿ ಮೋದಿ

11:03 PM Nov 09, 2022 | Team Udayavani |

ಶಿಮ್ಲಾ/ನವದೆಹಲಿ: ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರು ಆ್ಯಂಬ್ಯುಲೆನ್ಸ್‌ಗೆ ತೆರಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ಮೂಲಕ ಅವರು ದೇಶವಾಸಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

Advertisement

ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಚಾಂಬಿ ಎಂಬಲ್ಲಿ ಬುಧವಾರ ಈ ಘಟನೆ ನಡೆದಿದೆ. ಅವರು ಪ್ರಚಾರಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ರೋಗಿಯೊಬ್ಬರನ್ನು ಹೊತ್ತಿದ್ದ ಆ್ಯಂಬ್ಯುಲೆನ್ಸ್‌ ಧಾವಿಸಿ ಬಂತು. ಕೂಡಲೇ ಪ್ರಧಾನಿ ಮೋದಿಯವರು ಅದಕ್ಕೆ ತೆರಳಲು ಅವಕಾಶ ಮಾಡಿಕೊಟ್ಟಿದ್ದಾರೆ.


ಕಾಂಗ್ರೆಸ್‌ ವಿರುದ್ಧ ಕಟು ಟೀಕಾ ಪ್ರಹಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ “ಅಸ್ಥಿರತೆಗೆ ಕಾಂಗ್ರೆಸ್‌ ಹೆಸರುವಾಸಿ. ಆ ಪಕ್ಷದ ನಾಯಕರು ಭ್ರಷ್ಟಾಚಾರಕ್ಕೆ ಯೋಚನೆ ಮಾಡುತ್ತಿದ್ದರೆ. ನಾವು ದೇಶದ ಅಭಿವೃದ್ಧಿಯತ್ತ ಗಮನ ಹರಿಸುತ್ತೇವೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next