Advertisement

ರಾಹುಲ್‌ ವಿಮಾನಕ್ಕೆ ವಾರಾಣಸಿಯಲ್ಲಿ ಲ್ಯಾಂಡಿಂಗ್‌ಗೆ ಅವಕಾಶ ನೀಡಿಲ್ಲ: ಕಾಂಗ್ರೆಸ್‌

07:02 PM Feb 14, 2023 | Team Udayavani |

ವಾರಾಣಾಸಿ: ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರಯಾಣಿಸುತ್ತಿದ್ದ ವಿಮಾನವನ್ನು ವಾರಾಣಸಿಯ ಬಬತ್‌ ವಿಮಾನ ನಿಲ್ದಾಣಕ್ಕೆ ಇಳಿಯಲು ಅವಕಾಶ ನೀಡಲಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

Advertisement

ವಯನಾಡ್‌ನಿಂದ ಆಗಮಿಸುತ್ತಿದ್ದ ಅವರು ಇಲ್ಲಿನ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿತ್ತು. ಆದರೆ, ನಿಲ್ದಾಣದ ಅಧಿಕಾರಿಗಳು ಅದಕ್ಕೆ ಅವಕಾಶ ನೀಡಿಲ್ಲ ಎಂದು ಕಾಂಗ್ರೆಸ್‌ ನಾಯಕ ಅಜಯ್‌ ರಾಯ್‌ ಆರೋಪಿಸಿದ್ದಾರೆ.

ಈ ಆರೋಪವನ್ನು ವಾರಾಣಾಸಿ ವಿಮಾನ ನಿಲ್ದಾಣದ ಅಧಿಕಾರಿಗಳು ನಿರಾಕರಿಸಿದ್ದಾರೆ. ಅಜಯ್‌ ರಾಯ್‌ ಪ್ರಕಾರ, ಕಾಂಗ್ರೆಸ್‌ ನಾಯಕರು ರಾಹುಲ್‌ ಅವರನ್ನು ಸ್ವಾಗತಿಸಲು ಕಾದು ನಿಂತಿದ್ದರು. ಕಡೇಗಳಿಗೆಯಲ್ಲಿ ವಿಮಾನವನ್ನಿಳಿಸಲು ಅವಕಾಶ ನೀಡದೇ ಇದ್ದಿದ್ದರಿಂದ ರಾಹುಲ್‌ ನೇರವಾಗಿ ದೆಹಲಿಗೆ ತೆರಳಿದ್ದಾರೆ. ಇದಕ್ಕೆ ಸ್ಪಷ್ಟನೆ ನೀಡಿರುವ ವಾರಾಣಾಸಿ ನಿಲ್ದಾಣ ನಿರ್ದೇಶಕ ಆರ್ಯಮ ಸನ್ಯಾಲ್‌, ಅನುಮತಿ ನಿರಾಕರಣೆ ಮಾಡಿದ್ದು ನಾವಲ್ಲ.

ರಾಹುಲ್‌ರನ್ನು ಒಯ್ಯುತ್ತಿದ್ದ ಎಂ/ಎಸ್‌ ಏರ್‌ ಏರ್‌ವೆàಸ್‌ ಸೋಮವಾರ ಇ-ಮೇಲ್‌ ಕಳಿಸಿ, ವಾರಾಣಸಿಯಲ್ಲಿಳಿಯುವ ಕಾರ್ಯಕ್ರಮ ರದ್ದಾಗಿದೆ. ಆ ಪ್ರಕಾರವೇ ಎಲ್ಲ ನಡೆದಿದೆ ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next