Advertisement

ಕೊರಟಗೆರೆ: ಇಸ್ಪೀಟು ಅಡ್ಡೆಯ ಮೇಲೆ ದಾಳಿ; 2640 ನಗದು ವಶ

11:15 AM Oct 19, 2022 | Team Udayavani |

ಕೊರಟಗೆರೆ: ತಾಲೂಕಿನ ಹೊಳವನಹಳ್ಳಿ- ಬಿಡಿಪುರ ರಸ್ತೆ ಆದಿ ತಿಮ್ಮಪ್ಪನ ದೇವಾಲಯದ ಹಿಂಭಾಗದ ಅರಣ್ಯ ಪ್ರದೇಶದಲ್ಲಿ ಇಸ್ಪೀಟು ಆಟದಲ್ಲಿ ಪಣಕ್ಕಿಟ್ಟಿದ್ದ 2640 ರೂ. ಹಾಗೂ ಆಟದಲ್ಲಿ ಪಾಲ್ಗೊಂಡಿದ್ದ ಏಳು ಜನರನ್ನು ವಶಪಡಿಸಿಕೊಂಡ ಘಟನೆ ಕೊರಟಗೆರೆ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

ಆರೋಪಿಗಳಾದ ಪ್ರಕಾಶ್ ಮತ್ತು ಇತರೆ ಆರು ಜನ ಆರೋಪಿಗಳನ್ನು‌ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಸುಮಾರು 5-8 ಜನರು ಹಣವನ್ನು ಪಣವಾಗಿಟ್ಟುಕೊಂಡು ಇಸ್ಪೀಟ್‌ ನಿಂದ ಅಂದರ್- ಬಾಹರ್ ಎಂದು ಜೂಜಾಟವಾಡುತ್ತಿರುತ್ತಾರೆಂ ಎಂದು ಖಚಿತ ಮಾಹಿತಿ ಬಂದ ಮೇರೆಗೆ ಪಿಎಸ್ಐ ಚೇತನ್ ಕುಮಾರ್ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ತೆರಳಿ ಮರೆಯಲ್ಲಿ ನಿಂತು ಗಮನಿಸಿ ಬಳಿಕ ಸುಮಾರು ಏಳು ಜನ ಆರೋಪಿಗಳು ಇಸ್ಪೀಟ್‌ ಆಟವಾಡುತ್ತಾ ಅಂದರ್- ಬಾಹರ್ ಎಂದು ಕೂಗಿಕೊಂಡು ಹಣವನ್ನು ಪಣವಾಗಿ ಕಟ್ಟಿಕೊಂಡು ಇಸ್ಪೀಟು ಜೂಜಾಟವಾಡುತ್ತಿರುವುದು ಖಚಿತವಾಗಿದೆ.

ಪ್ರಕಟಣಕ್ಕೆ ಸಂಬಂಧಿಸಿದಂತೆ ಕೊರಟಗೆರೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಚೇತನ್ ಕುಮಾರ್, ಎಎಸ್ಐ ಯೋಗೀಶ್ ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next