Advertisement

ಚಿನ್ನಸ್ವಾಮಿಯಲ್ಲಿ ಪ್ಲಾಸ್ಟಿಕ್‌ ಪುಡಿ ಮಾಡುವ ಯಂತ್ರಕ್ಕೆ ಚಾಲನೆ

03:52 PM Jan 17, 2020 | Team Udayavani |

ಬೆಂಗಳೂರು: ಚಿನ್ನಸ್ವಾಮಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ಗುರುವಾರ ಪ್ಲಾಸ್ಟಿಕ್‌ ಪುಡಿ ಮಾಡುವ ಯಂತ್ರಕ್ಕೆ ಕೆಎಸ್‌ಸಿಎ ಅಧ್ಯಕ್ಷ ರೋಜರ್‌ ಬಿನ್ನಿ ಚಾಲನೆ ನೀಡಿದರು.

Advertisement

ಪ್ಲಾಸ್ಟಿಕ್‌ ತಡೆಗೆ ಕೆಎಸ್‌ಸಿಎ (ರಾಜ್ಯಕ್ರಿಕೆಟ್‌ ಸಂಸ್ಥೆ) ನಡೆಸಿರುವ ವಿನೂತನ ಪ್ರಯೋಗ ಇದಾಗಿದೆ. ಪ್ಲಾಸ್ಟಿಕ್‌ ನೀರಿನ ಬಾಟಲಿ ಸೇರಿದಂತೆ ಯಾವುದೇ ಪ್ಲಾಸ್ಟಿಕ್‌ ಉತ್ಪನ್ನ ವಸ್ತುಗಳು ಯಂತ್ರಕ್ಕೆ ಹಾಕಿದ ತಕ್ಷಣ ಪುಡಿ ಆಗುತ್ತದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಹೊಸ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತವಾಗಿದೆ.

ರವಿವಾರ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೆಲಿಯಾ ಪಂದ್ಯದಲ್ಲಿ ಮೊದಲ ಬಾರಿಗೆ ಈ ಪ್ಲಾಸ್ಟಿಕ್‌ ಪುಡಿ ಮಾಡುವ ಯಂತ್ರವನ್ನು ಬಳಸಲಾಗುವುದು. ವರ್ಷಕ್ಕೆ ಕನಿಷ್ಟ ಒಂದು ಲಕ್ಷ ಪ್ಲಾಸ್ಟಿಕ್ ಬಾಟಲಿಗಳನ್ನು ಪುಡಿ ಮಾಡುತ್ತದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next