Advertisement

ಕಲ್ಸಂಕ ಜಂಕ್ಷನ್‌: ವಾಹನ ದಟ್ಟಣೆ ತಪ್ಪಿಸಲು ಸರ್ಕಲ್‌ ನಿರ್ಮಾಣಕ್ಕೆ ಚಿಂತನೆ

12:55 PM Apr 25, 2022 | Team Udayavani |

ಉಡುಪಿ: ತೀರ್ಥಹಳ್ಳಿ – ಮಲ್ಪೆ ರಾ.ಹೆ. 169ಎ ಹಾದುಹೋಗುವ ಕಲ್ಸಂಕ ಜಂಕ್ಷನ್‌ ನಲ್ಲಿ ಅತಿಯಾದ ವಾಹನ ದಟ್ಟಣೆಯಿಂದ ಸಾರ್ವಜನಿಕವಾಗಿ ಸಮಸ್ಯೆ ಉಂಟಾಗುತ್ತಿದ್ದು, ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಕಲ್ಸಂಕ ಜಂಕ್ಷನ್‌ನಲ್ಲಿ ಸರ್ಕಲ್‌ ರಚಿಸುವ ಬಗ್ಗೆ ಶನಿವಾರ ರಾ.ಹೆ. ಎಂಜಿನಿಯರ್‌ಗಳ ಜತೆ ಶಾಸಕ ಕೆ.ರಘುಪತಿ ಭಟ್‌ ಸಭೆ ನಡೆಸಿ ಚರ್ಚಿಸಿದರು.

Advertisement

ಕಲ್ಸಂಕ ಜಂಕ್ಷನ್‌ನಲ್ಲಿ ಅತಿಯಾದ ವಾಹನ ದಟ್ಟಣೆ ಉಂಟಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ವಾಹನಗಳು ತಡೆಯಿಲ್ಲದೆ ಸಂಚರಿಸುವಂತಾಗಲು ರಘುಪತಿ ಭಟ್‌ ಅವರು ರಾ.ಹೆ. ಅಧಿಕಾರಿಗಳಿಗೆ ಸರ್ಕಲ್‌ ರಚಿಸುವ ಬಗ್ಗೆ ತಿಳಿಸಿರುವಂತೆ ಈ ಯೋಜನೆಯ ಅಂದಾಜು ವೆಚ್ಚ ಗಳ ಸಹಿತ ಪ್ರಾಯೋಗಿಕ ನೀಲನಕ್ಷೆ ತಯಾರಿಸಿ ರಾ.ಹೆ. ಸಹಾಯಕ ಕಾರ್ಯಪಾಲಕ ಅಭಿಯಂತರ ನಾಗರಾಜ್‌ ನಾಯ್ಕ್, ಸಹಾಯಕ ಅಭಿಯಂತರ ಮಂಜುನಾಥ್‌ ನಾಯಕ್‌ ವಿವರ ನೀಡಿ ಚರ್ಚಿಸಿದರು.

ಈ ನೀಲನಕ್ಷೆಯಲ್ಲಿ ಕೆಲವೊಂದು ಬದಲಾವಣೆ ಸೂಚಿಸಿ ಸಾರ್ವಜನಿಕವಾಗಿ ಯಾವುದೇ ಸಮಸ್ಯೆ ಉಂಟಾಗದೆ ಎಲ್ಲ ದಿಕ್ಕುಗಳಿಂದ ಬರುವ ವಾಹನಗಳು ಈ ಕಲ್ಸಂಕ ಜಂಕ್ಷನ್‌ನಲ್ಲಿ ಯಾವುದೇ ತಡೆಯಿಲ್ಲದೆ ಸಂಚರಿಸುವಂತಾಗಲು 30 ಕೋ.ರೂ. ವೆಚ್ಚದ ಸಮರ್ಪಕ ಸರ್ಕಲ್‌ ನಿರ್ಮಾಣಕ್ಕೆ ಸೂಕ್ತ ಪ್ರಸ್ತಾವನೆ ತಯಾರಿಸುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next